Wednesday, May 8, 2024

ಶಿಡ್ಲಘಟ್ಟದಲ್ಲಿ ‘ಬಿಜೆಪಿ ಧ್ವಜ ಹಾರಿಸಿ’ಯೇ ತೀರುತ್ತೇವೆ : ಸೀಕಲ್ ರಾಮಚಂದ್ರ ಗೌಡ

ಬೆಂಗಳೂರು : ಈ ಬಾರಿ ಶಿಡ್ಲಘಟ್ಟದಲ್ಲಿ ಬಿಜೆಪಿ ಧ್ವಜ ಹಾರಿಸಿಯೇ ಹಾರಿಸುತ್ತೇವೆ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಶಿಡ್ಲಘಟ್ಟ ಮತಕ್ಷೇತ್ರದ ಪಲಿಚೆರ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಸದ್ದಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ಸೀಕಲ್ ರಾಮಚಂದ್ರಗೌಡ ಅವರ ಸಮ್ಮುಖದಲ್ಲಿ ಬಿಜೆಪಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

ನೂತನವಾಗಿ ಪಕ್ಷ ಸೇರಿದವರನ್ನು ಪಕ್ಷದ ಶಾಲು ಹಾಕಿ ಆತ್ಮೀಯವಾಗಿ ಬರಮಾಡಿಕೊಂಡು ಬಳಿಕ ಅವರು ಮಾತನಾಡಿದರು. ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರ ಎಂದು ಹೇಳಿದರು.

ಮೋದಿಯೋಗಿ ಬಲಾಢ್ಯ ಶಕ್ತಿಗಳು

ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡು ಬಲಾಢ್ಯ ಶಕ್ತಿಗಳು. ಯಾರೇ ಆಗಲಿ ಓಲೈಕೆ ರಾಜಕಾರಣ ಮಾಡಬಾರದು. ವಿವೇಕಾನಂದರ ವಾಣಿಯಾದ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಸೀಕಲ್ ರಾಮಚಂದ್ರಗೌಡ ಅವರು ಕರೆ ನೀಡಿದರು.

ಇದನ್ನೂ ಓದಿ : ನಾಳೆ ಸೀಕಲ್ ರಾಮಚಂದ್ರಗೌಡ ಪರ ಕಿಚ್ಚ ಸುದೀಪ್ ಮತ ಬೇಟೆ

ಬಾಬ್ರಿ ಮಸೀದಿ, ರಾಮ ಮಂದಿರ ಆಗ್ತಿದೆ

ಟಿಪ್ಪು ಎಕ್ಸ್ಪ್ರೆಸ್ ಇವತ್ತು ಒಡೆಯರ್ ಎಕ್ಸ್ಪ್ರೆಸ್ ಆಗಿದೆ. ಬಾಬ್ರಿ ಮಸೀದಿ, ರಾಮ ಮಂದಿರ ಆಗ್ತಾ ಇದೆ. ಮೊಘಲ್ ಉದ್ಯಾನವನ ಅಮೃತ್ ಉದ್ಯಾನವನ ಆಗಿದೆ. ಹೀಗೆ ಅಭಿವೃದ್ಧಿಯ ಜೊತೆಗೆ ಪರಂಪರೆಯನ್ನು ಉಳಿಸುವ ಕೆಲಸ ಮಾಡ್ತಾ ಇದೆ ಬಿಜೆಪಿ ಎಂದು ಅವರು ಹೇಳಿದರು.

ಮಾಜಿ ಶಾಸಕರಾದ ಎಂ.ರಾಜಣ್ಣ ಮಾತನಾಡಿ, ಬಿಜೆಪಿ ಸರ್ಕಾರ ಮತ್ತು ಮೋದಿ ಅವರು ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿದರು. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಪೆನ್ಷನ್ ಸ್ಕೀಮ್ ಗಳ ಬಗ್ಗೆ ತಿಳಿಸಿದರು.

RELATED ARTICLES

Related Articles

TRENDING ARTICLES