Thursday, May 9, 2024

ನಾಳೆ ಸೀಕಲ್ ರಾಮಚಂದ್ರಗೌಡ ಪರ ಕಿಚ್ಚ ಸುದೀಪ್ ಮತ ಬೇಟೆ

ಬೆಂಗಳೂರು : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ರಾಜ್ಯ ಬಿಜೆಪಿ ಹಾಗೂ ರಾಷ್ಟ್ರೀಯ ನಾಯಕರು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಪರ ಪ್ರಚಾರ ನಡೆಸಿದ್ದಾರೆ. ಇದೀಗ, ಶಿಡ್ಲಘಟ್ಟದಲ್ಲಿ ಕಿಚ್ಚು ಹಚ್ಚಲು ಕಿಚ್ಚ ಸುದೀಪ್ ರೋಡ್ ಶೋ ನಡೆಸಲಿದ್ದಾರೆ.

ನಾಳೆ (ಮೇ 6) ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಇಡೀ ದಿನ ರೋಡ್ ಶೋ, ರ್ಯಾಲಿ ನಡೆಸುವ ಮೂಲಕ ಸೀಕಲ್ ರಾಮಚಂದ್ರಗೌಡ ಅವರ ಪರ ಮತಯಾಚನೆ ಮಾಡಲಿದ್ದಾರೆ.

ಬೆಳಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬುರುಡಗುಂಟೆಯಲ್ಲಿ ಕಿಚ್ಚ ಸುದೀಪ್ ಅವರು ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ರಿಂದ 1.30ರವರೆಗೆ ಬುರುಡಗುಂಟೆಯಿಂದ ದಿಬ್ಬೂರಹಳ್ಳಿಯ ವರೆಗೆ ರ್ಯಾಲಿ ನಡೆಸಲಿದ್ದಾರೆ. ಬಳಿಕ, ಮಧ್ಯಾಹ್ನ 1.30ರಿಂದ 4 ಗಂಟೆಯವರೆಗೆ ದಿಬ್ಬೂರಳ್ಳಿಯಲ್ಲಿ ರೋಡ್ ಶೋ ನಡೆಸಿ, ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ : ಮೋದಿ ಆಡಳಿತದಿಂದ ‘ದೇಶ ಸುಭದ್ರ’ವಾಗಿದೆ : ಸೀಕಲ್ ರಾಮಚಂದ್ರಗೌಡ

ರಾಮಚಂದ್ರಗೌಡರ ಜೊತೆ ಪತ್ನಿ ಪ್ರಚಾರ

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಅವರ ಪತ್ನಿ ರಾಣಿ ಅವರು ಕೊತ್ತನೂರು, ಭಕ್ತರಹಳ್ಳಿ ಮತ್ತು ಚೀಮಂಗಲ ಗ್ರಾಮಗಳಲ್ಲಿ ಪತಿಯ ಪರ ಪ್ರಚಾರ ನಡೆಸಿದರು. ಗ್ರಾಮದ ಪ್ರತಿ ಮನೆ ಮನೆಗಳಿಗೂ ಭೇಟಿ ನೀಡಿ ಪ್ರತಿಯೊಬ್ಬರನ್ನು ಭೇಟಿ ಮಾಡಿ ಬಿಜೆಪಿಗೆ ಮತ ನೀಡುವಂತೆ ವಿನಂತಿಸಿಕೊಂಡರು.

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

ಚೀಮಂಗಲ ಗ್ರಾಮ ಪಂಚಾಯ್ತಿ ಕೆ.ಜಿ ಪುರ ಗ್ರಾಮದ ಚನ್ನಪ್ಪನವರ ಕುಟುಂಬ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ನಾಗರಾಜು, ಚೆನ್ನರಾಜು, ಶಿವರಾಜು, ಚನ್ನಕೃಷ್ಣಪ್ಪ, ಪ್ರಶಾಂತ್, ರಾಮಕೃಷ್ಣ, ಮುನಿರಾಜು ಮತ್ತು ಮುನಿಯಪ್ಪ ಅವರು ಬಿಜೆಪಿಗೆ ಸೇರಿದರು. ಸೀಕಲ್ ಆನಂದಗೌಡ ಅವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES