Friday, May 10, 2024

ನಾಮಪತ್ರ ಸಲ್ಲಿಸಲು ಕೋಲಾರಕ್ಕೆ ಮತ್ತೆ ಬರುವೆ; ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಲಾರದ ಮೆಥೋಡಿಸ್ಟ್​ ಚರ್ಚ್​ನಲ್ಲಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಇಂದು ಬಹಿರಂಗವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ನನಗೂ ಕೋಲಾರ ಜನರ ಮೇಲೆ ಪ್ರೀತಿ ಇದೆ. ನಾನು ಇವತ್ತು ನಾಮಿನೇಷನ್​ ಮಾಡಲು ಬಂದಿಲ್ಲ. ನಾಮಪತ್ರ ಸಲ್ಲಿಸಲು ಮತ್ತೆ ಕೋಲಾರಕ್ಕೆ ಬರುತ್ತೇನೆ. ಬಾದಾಮಿ, ವರುಣಾ ಮತಕ್ಷೇತ್ರದಲ್ಲೂ ಸ್ಪರ್ಧೆ ಮಾಡುವಂತೆ ಒತ್ತಾಯವಿದೆ ಎಂದರು.

ಆದರೆ, ನನಗೆ ಕೋಲಾರದಲ್ಲಿ ಸ್ಪರ್ಧೆ ಮಾಡಬೇಕೆಂದು ಒತ್ತಾಯವಿದೆ. ನನಗೂ ಕೋಲಾರ ಜನರ ಮೇಲೆ ಪ್ರೀತಿ ಇದೆ ಎಂದು ಸಿದ್ದರಾಮಯ್ಯ ಅವರು ಕೋಲಾರವನ್ನ ಹಾಡಿಹೊಗಳಿದರು.

RELATED ARTICLES

Related Articles

TRENDING ARTICLES