Thursday, May 9, 2024

ಮಾಜಿ ಸಿಎಂ ಸಿದ್ದು ಪರ ಬ್ಯಾಟಿಂಗ್ ಮಾಡಿದ ಚೆಲುವ ನಾರಾಯಣಸ್ವಾಮಿ

ಮಂಡ್ಯ:‘ಕಟೀಲ್ ನ ನಾಲಿಗೆ-ಮೆದುಳಿಗೆ ಕನೆಕ್ಷನ್ ಇಲ್ಲ’ ಎಂದು ಮಾಜಿ ಸಚಿವ ನಾರಾಯಣಸ್ವಾಮಿ ರವರು ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಗುಡುಗಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಮಾಜಿ ಸಚಿವ ಚೆಲುವ ನಾರಾಯಣಸ್ವಾಮಿ ರವರು, ಕಟೀಲ್-ಸಿ.ಟಿ. ರವಿನಾ ಆಸ್ಪತ್ರೆಗೆ ಸೇರಿಸಿ. ಸಿದ್ದರಾಮಯ್ಯ ಖಳನಾಯಕ ಎಂಬ ಕಟೀಲ್ ಹೇಳಿಕೆ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಕಟೀಲ್ ವಿರುದ್ಧ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಬಿಜೆಪಿಯವರ ಒಂದಷ್ಟು ಜನಕ್ಕೆ ಕನೆಕ್ಷನ್ ಇಲ್ಲ. ಸಿದ್ದರಾಮಯ್ಯಗೆ ಬೈದರೆ ಬಿಜೆಪಿಯವರಿಗೆ ವೈಯಕ್ತಿಕ ಲಾಭ. ಕಟೀಲ್ ಅಧ್ಯಕ್ಷರಾಗಿದ್ದಾರೆ, ಮೂರು ಸಲ ತೆಗೆಯಲು ಹೊರಟಿದ್ರು.

ಚುನಾವಣಾ ಟೈಮ್ RSS ಬ್ಯಾಗ್ರೌಂಡ್ ಇದೆ ಅಂತ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ-ಕಟೀಲ್ ಗೆ ಹೋಲಿಕೆ ಮಾಡಲು ಸಾದ್ಯವಿಲ್ಲ.
ಸಿದ್ದರಾಮಯ್ಯ ರಾಜ್ಯದ ಜನರ ಪರ ಕೆಲಸ ಮಾಡಿದವರು. ಸಿದ್ದರಾಮಯ್ಯ ಬಗ್ಗೆ ಮಾತನಾಡಬೇಕಾದ್ರೆ ಹಿಡಿತ ಇಟ್ಟುಕೊಳ್ಳಿ. ಕಟೀಲ್ ಗೆ ಮಾಜಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ.

RELATED ARTICLES

Related Articles

TRENDING ARTICLES