Friday, May 10, 2024

ಓಲಾ, ಉಬರ್‌ಗೆ ಸಾರಿಗೆ ಸಚಿವರ ವಾರ್ನಿಂಗ್

ಬೆಂಗಳೂರು : ವಿಧಾನ ಸೌಧದಿಂದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಓಲಾ, ಉಬರ್ ಬಗ್ಗೆ ಹಲವರಿಂದ ದೂರುಗಳು ಬಂದಿತ್ತು. ತಾಂತ್ರಿಕ ಕಾರಣದಿಂದ ನೋಟಿಸ್ ನೀಡಲಾಗಿತ್ತು. ಪರವಾನಿಗೆ ಷರತ್ತು ಉಲ್ಲಂಘನೆ ಮಾಡಬಾರದು. ಪರವಾನಿಗೆ ಷರತ್ತು ಉಲ್ಲಘಿಸಿದ ಕಾರಣ ನೋಟಿಸ್ ನೀಡಲಾಗಿದೆ. ಅವರಿಗೆ ಸ್ಪಷ್ಟನೆ ನೀಡಲು ಹೇಳಲಾಗಿದೆ ಎಂದರು.

ನೋಟಿಸ್ ಕೊಟ್ಟ ಬಳಿಕವೂ ಸಂಚಾರ ಸೇವೆ ಮಾಡುತ್ತಿದ್ದರೆ, ಅಂತಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

RELATED ARTICLES

Related Articles

TRENDING ARTICLES