Thursday, May 2, 2024

ನೇಹಾ ಕೊಲೆ : ಕೊತ್ವಾಲ್ ಶಿಷ್ಯ ‘ಬ್ರದರ್ಸ್’​ಗಳನ್ನು ಬೀದಿಗೆ ಬಿಟ್ಟಿದ್ದಾರೆ : ಬಿಜೆಪಿ ಕಿಡಿ

ಬೆಂಗಳೂರು : ಕೊತ್ವಾಲ್‌ ಶಿಷ್ಯ ಡಿ.ಕೆ. ಶಿವಕುಮಾರ್ ಅವರು ಬ್ರದರ್ಸ್‌ಗಳನ್ನು ಬೀದಿಗೆ ಬಿಟ್ಟು ಹಿಂದೂಗಳನ್ನೇ ಟಾರ್ಗೆಟ್‌ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಕುರಿತು ರಾಜ್ಯ ಬಿಜೆಪಿ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ನ​ ಪಾ’ಕೈ’ಸ್ತಾನ್ ಸರ್ಕಾರದಿಂದ‌ ತಾಲಿಬಾನ್‌ ಮಾಡೆಲ್‌ ಜಾರಿಯಾಗಿದೆ. ಜೈ ಶ್ರೀರಾಮ್‌ ಎಂದರೆ ಮತಾಂಧ ಬ್ರದರ್ಸ್‌ಗಳು ಹಿಂದೂ ಯುವಕರ ಮೇಳೆ ಹಲ್ಲೆ ಮಾಡುತ್ತಾರೆ. ಲವ್‌ ಜಿಹಾದ್‌ಗೆ ಒಪ್ಪದೇ ಇದ್ದರೆ ಹಿಂದೂ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದೆ.

ಯದುವೀರ್ ಒಡೆಯರ್‌ ಪರ ನಿಂತರೆ ಕಾರು ಹರಿಸಿ ಕೊಲೆ ಮಾಡಿಸುತ್ತಾರೆ. ಡ್ರಾಪ್ ಕೊಟ್ಟರೆ‌ ಮತಾಂಧರಿಂದ ಹಿಗ್ಗಾಮುಗ್ಗ ಥಳಿತ ನಡೆಯುತ್ತದೆ. ಕನ್ನಡ ಮಾತನಾಡಿದರೆ ಕನ್ನಡ ನಟಿ ಮೇಲೆಯೇ ಹಲ್ಲೆಗೆ ಯತ್ನ ಮಾಡುತ್ತಾರೆ ಎಂದು ಜಾಡಿಸಿದೆ.

ಕರ್ನಾಟಕ ಮತಾಂಧರ ಗಲಭೆಯ ತೋಟ

ಚುನಾವಣೆ ಸಮಯದಲ್ಲಿ ಜಿಹಾದಿ ಮತಾಂಧ ಬ್ರದರ್ಸ್‌ಗಳನ್ನು ಸಿದ್ದರಾಮಯ್ಯ ಹಾಗೂ ಆ ದಿನಗಳ ಕೊತ್ವಾಲ್‌ ಶಿಷ್ಯ ಡಿ.ಕೆ. ಶಿವಕುಮಾರ್ ಅವರು ಬೀದಿಗೆ ಬಿಟ್ಟು ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ ಬೆದರಿಸುತ್ತಿದ್ದಾರೆ. ಕರ್ನಾಟಕವನ್ನು ಮತಾಂಧರ ಗಲಭೆಯ ತೋಟವನ್ನಾಗಿ ಮಾಡಿದೆ ರಾಹುಲ್ ಗಾಂಧಿ ಅವರ ದ್ವೇಷದ ಅಂಗಡಿ ಎಂದು ಬಿಜೆಪಿ ಕುಟುಕಿದೆ.

RELATED ARTICLES

Related Articles

TRENDING ARTICLES