Wednesday, May 1, 2024

ಕಾಂಗ್ರೆಸ್ ನಾಯಕರು ನಪುಸಂಕರು, ಷಂಡರು : ಬಿಜೆಪಿ ಮುಖಂಡ ಬೆಳ್ಳುಬ್ಬಿ

ಬೀದರ್ : ಕಾಂಗ್ರೆಸ್​ ಪಕ್ಷದಲ್ಲಿ ಇರುವವರು ನಪುಸಂಕರು, ಷಂಡರು ಎಂದು ಬಹಿರಂಗ ವೇದಿಕೆಯಲ್ಲೇ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೀದರ್ ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ನಾಮಪತ್ರ ಸಲ್ಲಿಕೆ ನಿಮಿತ್ತ ನಡೆದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.

ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೊಗಿ ವಾಪಸ್ಸಾಗಿ ಬರುವ ಸಂದರ್ಭದ ಕಥೆಯನ್ನು ಹೇಳುತ್ತ, ಕಾಂಗ್ರೆಸ್ ಪಕ್ಷಕ್ಕೆ ತುಲನೆ ಮಾಡಿದ್ದಾರೆ. ಇದೇ ವೇಳೆ ಮಾತಿನ ಭರದಲ್ಲಿ ಕಾಂಗ್ರೆಸ್​ನಲ್ಲಿರುವವರು ನಪುಸಂಕರು, ಷಂಡರು ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಭಗವಂತ್ ಖುಬಾ ಮಾತನಾಡಿ, ಕಾಂಗ್ರೆಸ್ ನವರಿಗೆ 75 ವರ್ಷಗಳ ನಂತರ ಬುದ್ಧಿ ಬಂದಿದೆ. ಇವಾಗ ಅವರಿಗೆ ಲೋಕಸಭಾ ಚುನಾವಣೆ ಮಹತ್ವ ಅನ್ನಿಸುತ್ತಿದೆ. ಮೊದಲು ಹಣ, ಹೆಂಡ, ಜನರನ್ನು ಭಯಭೀತ ಗೊಳಿಸಿ ಅಧಿಕಾರಿ ಪಡೆಯುತ್ತಿದ್ದರು. ಮೋದಿ ಅವರ ಕಾರ್ಯ ವೈಖರಿ ನೋಡಿ ಇವರಿಗೆ ಇವಾಗ ಮಹತ್ವ ಅನ್ನಿಸುತ್ತಿದೆ. ಬಿಜೆಪಿ ಪಕ್ಷ ದೇಶದ ಜನರ ಏಳಿಗೆಗಾಗಿ, ಅಸ್ಮಿತೆಗಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಓಡಿ ಬಂದ ಖೂಬಾ

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನಾಮಪತ್ರ ಸಲ್ಲಿಸಲು ಓಡೋಡಿ ಬಂದರು. ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮಪತ್ರ ಸಲ್ಲಿಸಲು ಅವಕಾಶ ಹಿನ್ನೆಲೆ ಡಿಸಿ ಕಚೇರಿಗೆ ಓಡುತ್ತಾ ತೆರಳಿದರು. ಖೂಬಾ ಹಿಂದೆಯೇ ಬಸವಕಲ್ಯಾಣ ಶಾಸಕ ಶರಣು ಸಲಗರ್, ಸಿದ್ದು ಪಾಟೀಲ್, ಅವಿನಾಶ ಜಾಧವ್ ಓಡಿ ಹೋದರು. ಮುಂದೆ ಹೋಗುತ್ತಲೇ ಶಾಸಕರನ್ನ ಖೂಬಾ ಕೈ ಮಾಡಿ ಕರೆದರು.

RELATED ARTICLES

Related Articles

TRENDING ARTICLES