ಹಾಸನ: ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವೀಡಿಯೋಗಳಿಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯನ್ನು ಪವರ್ ಟಿವಿ ಪ್ರಸಾರ ಮಾಡುತ್ತಿದ್ದಂತೆ ಈ ಸುದ್ದಿ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ‘ದಾರಿತಪ್ಪಿದ ಮೊಮ್ಮಗ’ನ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಎಕ್ಸ್ಕ್ಲೂಸಿವ್ ಮಾಹಿತಿ ಹೊರಬಂದಿದ್ದು ಸಂತ್ರಸ್ತೆಯರಿಗೆ ಜೆಡಿಎಸ್ ಮುಖಂಡರಿಂದ ಬ್ಲಾಕ್ಮೇಲ್, ಸೆಟಲ್ಮೆಂಟ್ ಮಾತುಗಳು ಕೇಳಿಬರುತ್ತಿದೆ.
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣದ ಬಗ್ಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಎಸ್ಐಟಿ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದೆ. ವಿಶೇಷ ತನಿಖಾ ತಂಡವು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದು ಸಂತ್ರಸ್ತೆಯರಿಂದ ಹೇಳಿಕೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ: ಸಂಕಷ್ಟದಿಂದ ಪಾರಾಗಲು ಹೋಮದ ಮೊರೆ ಹೋದ ರೇವಣ್ಣ
ಇನ್ನು, ತನಿಖೆ ನಡೆಯುತ್ತಿರುವ ಬೆನ್ನಲ್ಲೆ ಜೆಡಿಎಸ್ ಮುಖಂಡ ಸಾ.ರಾ ಮಹೇಶ್ ಸಂತ್ರಸ್ತ ಮಹಿಳೆಯರನ್ನು ಭೇಟಿ ಮಾಡಿ ಸೆಟಲ್ಮೆಂಟ್ಗಳನ್ನು ಮಾಡಿಕೊಳ್ಳುವ ಮಾತುಗಳನ್ನು ಆಡುತ್ತಿದ್ದು ಇದಕ್ಕೆ ಸಂತ್ರಸ್ತೆಯರು ಒಪ್ಪಿಕೊಳ್ಳದೆ ಇದ್ದಕ್ಕೆ ತನಿಖೆಗೆ ಸಹಕರಿಸದಂತೆ ಹಾಗು ಯಾವುದೇ ಹೇಳಿಕೆಯನ್ನು ನೀಡದಂತೆ, ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆಯರ ಕುಟುಂಬ ಖುದ್ದು ಪವರ್ ಟಿವಿಗೆ ಮಾಹಿತಿ ನೀಡಿದೆ.
ಪವರ್ ಟಿವಿ ವರದಿ ಬೆನ್ನಲ್ಲೇ ಈಗಾಗಲೇ 12 ಕ್ಕು ಹೆಚ್ಚು ಸಂತ್ರಸ್ತ ಮಹಿಳೆಯರು ವಿಶೇಷ ತನಿಖಾ ತಂಡ (SIT) ಮುಂದೆ ಪ್ರಜ್ವಲ್ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಲು ಮುಂದಾಗಿದ್ದಾರೆ. ಈ ನಡುವೆ ಜೆಡಿಎಸ್ ಮುಖಂಡರು ಸಂತ್ರಸ್ತೆಯರ ಮನೆಗೆ ಭೇಟಿ ನೀಡಲು ಮುಂದಾಗಿದ್ದಾರೆ.