ಕೆಂಡಸಂಪಿಗೆ ಹಾಗೂ ಟಗರು ಸಿನಿಮಾಗಳ ಖ್ಯಾತಿಯ ನಟಿ ಮಾನ್ವಿತಾ ಹರೀಶ್, ಟೆಕ್ಕಿ ಅರುಣ್ ಕುಮಾರ್ ಕೈ ಹಿಡಿಯೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಕಳಸದ GSB ಸಭಾ ಭವನದಲ್ಲಿ ನಡೆದ ಕಟಕ ಲಗ್ನದಲ್ಲಿ ಸಪ್ತಪದಿ ತುಳಿದಿದ್ದಾರೆ.
ಇತ್ತೀಚೆಗೆ ತಾಯಿಯನ್ನ ಕಳೆದುಕೊಂಡು ಒಂಟಿಯಾಗಿದ್ದ ಟಗರುಪುಟ್ಟಿ ಇದೀಗ ಅರುಣ್ ಜೊತೆ ವೈವಾಹಿಕ ಜೀವನಕ್ಕೆ ನಾಂದಿ ಹಾಡುವ ಮೂಲಕ ಜಂಟಿ ಆಗಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನೆರವೇರಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಒಬ್ಬ ಸೆಕ್ಸ್ ಕ್ರಿಮಿನಲ್: ನಟಿ ಕಸ್ತೂರಿ ಶಂಕರ್
ಈ ಮದುವೆ ಸಂಭ್ರಮಕ್ಕೆ ಕುಟುಂಬದ ಸದಸ್ಯರು, ಸ್ನೇಹಿತರು, ಚಿತ್ರರಂಗದ ಗಣ್ಯರು ಹಾಜರಾಗಿ ನವಜೋಡಿಗೆ ಶುಭಕೋರಿ ಹಾರೈಸಿದ್ದಾರೆ.