ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿರುದ್ದ ದೇಶಾದ್ಯಂತ್ಯ ವ್ಯಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ದಕ್ಷಿಣ ಭಾರತದ ನಟಿ ಕಸ್ತೂರಿ ಶಂಕರ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಭಾರೀ ಚರ್ಚೆಗೆ ಗ್ರಾಸವಾಗಿರುವ ಪ್ರಜ್ವಲ್ ರೇವಣ್ಣ ರಾಸಲೀಲೆ ಆರೋಪ ಪ್ರಕರಣದ ಬಗ್ಗೆ ಈಗಾಗಲೇ ನಟ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ಇದೀಗ ತಮಿಳು ನಟಿ ಕಸ್ತೂರಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿ ಕುಟುಕಿದ್ದಾರೆ. ಬಿಜೆಪಿ ಇದನ್ನು ಖಂಡಿಸಿ ಮೈತ್ರಿ ಬಿಟ್ಟು ಹೊರ ಬರದಿದ್ದರೆ ಮೇ 7ರ ಚುನಾವಣೆ ಅವರ ವಿರುದ್ಧವಾಗಿರುತ್ತದೆ ಎಂದಿದ್ದಾರೆ. “ಇದು ಜೆಡಿ(ಎಸ್) ಅಗ್ರಶ್ರೇಣಿ. ಮಾಜಿ ಪ್ರಧಾನಿ ದೇವೇಗೌಡರು ಕರ್ನಾಟಕದಲ್ಲಿ ಮೊದಲ ಬಿಜೆಪಿ ಸರ್ಕಾರವನ್ನು ಉರುಳಿಸಿದರು.
ಇದನ್ನೂ ಓದಿ: ಇದೆಲ್ಲ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿಹೋಗುವುದಿಲ್ಲ: ಹೆಚ್.ಡಿ ರೇವಣ್ಣ
ಅವರ ಪುತ್ರ ಕುಮಾರಸ್ವಾಮಿ ತನ್ನ ಮಗನ ವಯಸ್ಸಿಗಿಂತ ಚಿಕ್ಕ ನಟಿಯನ್ನು 2ನೇ ಮದುವೆ ಆಗಿದ್ದರು. ಈಗ ಪ್ರಜ್ವಲ್ ರೇವಣ್ಣ ಸರದಿ. ಸೆ* ಕ್ರಿಮಿನಲ್. ಸಂಸ್ತ್ರಸ್ತೆಯರ ಸಾವಿರಾರು ವಿಡಿಯೋಗಳು ಸಿಕ್ಕಿವೆ” “ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸುವ ಪ್ರಯತ್ನದಲ್ಲಿ ಇಂತಹವರೊಟ್ಟಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಬಿಜೆಪಿಗೆ ನಾಚಿಕೆಯಾಗಬೇಕು. ಇಂತಹವರ ಪಕ್ಕದಲ್ಲಿ ನಿಂತು ಮೋದಿ ತಮ್ಮ ಬ್ರ್ಯಾಂಡ್ ಅನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಅಪರಾಧಗಳ ಬಗ್ಗೆ ಜೆಡಿಎಸ್ಗೆ ಗೊತ್ತಿತ್ತು ಎನ್ನಲಾಗ್ತಿದೆ. ಬಿಜೆಪಿ ಅವರನ್ನು ಖಂಡಿಸಿ ಈ ಮೈತ್ರಿಯಿಂದ ಹೊರಬರದ ಹೊರತು, ಮೇ 7ರ ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಆಗುತ್ತದೆ” ಎಂದು ನಟಿ ಕಸ್ತೂರಿ ಟ್ವೀಟ್ ಮಾಡಿದ್ದಾರೆ.
ತಮಿಳು ನಟಿ ಕಸ್ತೂರಿ ಶಂಕರ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ನಟನೆಯ ‘ಜಾಣ’ ಸಿನಿಮಾ ಮೂಲಕ ಆಕೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ‘ಹಬ್ಬ’, ‘ಒನ್ಮ್ಯಾನ್ ಆರ್ಮಿ’, ‘ತುತ್ತಾ ಮುತ್ತಾ’, ‘ಪ್ರೇಮಕ್ಕೆ ಸೈ’ ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ತಮ್ಮ ಬೋಲ್ಡ್ ಕಾಮೆಂಟ್ಗಳಿಗೆ ಆಕೆ ಸದಾ ಸುದ್ದಿಯಲ್ಲಿ ಇರುತ್ತಾರೆ.
This is the top tier of JD(S).
Ex pm Deve Gowda who toppled the first BJP govt
His son Kumaraswamy, whose lover turned 2nd wife is an actress younger than his son
And PrajwalRevanna ! Sex criminal with thousands of videos of his victims!
Shame on BJP for ….
-Cont pic.twitter.com/zVGIJaefcs— Kasturi (@KasthuriShankar) April 29, 2024