Wednesday, May 1, 2024

ಸಿದ್ದರಾಮಯ್ಯ ಈಗ ವೀಕ್ ಆಗಿದ್ದಾರೆ : ಡಾ.ಕೆ. ಸುಧಾಕರ್

ದೇವನಹಳ್ಳಿ : ಡಾ.ಕೆ. ಸುಧಾಕರ್ ಭ್ರಷ್ಟಾಚಾರದಿಂದ ಸೋತ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.

ದೇವನಹಳ್ಳಿಯಲ್ಲಿ ಮಾತನಾಡಿದ ಅವರು, 2013 ರಿಂದ 2018 ರವರೆಗೂ ಇದ್ದ ಸಿದ್ದರಾಮಯ್ಯ ಈಗ ಕಾಣ್ತಿಲ್ಲ. ಸಿದ್ರಾಮಯ್ಯ ಈಗ ವೀಕ್ ಆಗಿದ್ದಾರೆ ಎಂದು ಕುಟುಕಿದ್ದಾರೆ.

ಸೋತವರೆಲ್ಲ ಭಷ್ಟರು ಎನ್ನುವ ಹೊಸ ಫಾರ್ಮುಲಾ ಹೇಳ್ತಿದ್ದಾರೆ ಇವರು. ಸಿಎಂ ಆಗಿ 2018 ರಲ್ಲಿ ಹೀನಾಮಾಯವಾಗಿ ಚಾಮುಂಡೇಶ್ವರಿಯಲ್ಲಿ ಸೋತರಲ್ಲ ನೀವು. ನೀವು ಆಗ ಎಷ್ಟು ಭ್ರಷ್ಟಾಚಾರ ಮಾಡಿ ಚುನಾವಣೆಯಲ್ಲಿ ಸೋತ್ರಿ? ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತರಲ್ಲ, ಎಷ್ಟು ಭ್ರಷ್ಟಾಚಾರ ಮಾಡಿದ್ರು..? ಎಂದು ಪ್ರಶ್ನೆ ಮಾಡಿದ್ದಾರೆ.

ಒಕ್ಕಲಿಗ ನಾಯಕ ಬೆಳೆಯುವುದು ಸಯಸಲ್ಲ

ನಾನು ಸಿದ್ದರಾಮಯ್ಯ ಅವರನ್ನ ತುಂಬಾ ಹತ್ತಿರದಿಂದ ನೋಡಿದ್ದೀನಿ. ಸಿದ್ದರಾಮಯ್ಯ ಒಕ್ಕಲಿಗ ನಾಯಕ ಬೆಳೆಯುವುದು ಸಯಸಲ್ಲ. ಒಕ್ಕಲಿಗ ನಾಯಕನನ್ನ ಅವರು ದ್ವೇಷ ಮಾಡುವುದು ಜಗಜ್ಜಾಹಿರು. ಹೀಗಾಗಿ, ಅವರ ಹೇಳಿಕೆ ನನಗೇನು ಆಶ್ಚರ್ಯ ತಂದಿಲ್ಲ. ನ್ಯಾಯಾಲಯ ಇದೆ, ನ್ಯಾಯಾಂಗ ತನಿಖೆ ಆಗಬೇಕಾದ್ರೆ ಸಿಎಂ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಚಾಟಿ ಬೀಸಿದ್ದಾರೆ.

ಸಿಎಂ ಗಿಮಿಕ್ ರಾಜಕಾರಣ ಮಾಡ್ತಿದ್ದಾರೆ

ಮೆಲ್ನೋಟಕ್ಕೆ ಗೊತ್ತಾಗುತ್ತೆ, ಇದೆಲ್ಲ ಪೂರ್ವಗ್ರಹ ಪೀಡಿತ ತನಿಖೆ ಮಾಡಿಸುತ್ತಿದ್ದಾರೆ. ಬೇಕಾದ ರೀತಿ ವರದಿಗಳನ್ನ ತರಸಿಕೊಳ್ಳುವುದು ಇದೆ. ಆದ್ರೆ, ಕಾನೂನು ಇದೆ. ನಾನು ನಂಬಿದ್ದೇನೆ, ಸತ್ಯಮೇವ ಜಯತೆ. ನಾನು ಅಂತ:ಕರಣದಿಂದ ಕೆಲಸ ಮಾಡಿದ್ದೇನೆ. ಟೊಳ್ಳು ಬೆದರಿಕೆಗೆ ಎದುರುವುದಿಲ್ಲ. ಚುನಾವಣೆಯಲ್ಲಿ ಅವರ ಅಭ್ಯರ್ಥಿ ಗೆಲ್ಲಬೇಕು ಅಂತ ಗಿಮಿಕ್ ರಾಜಕಾರಣ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES