Wednesday, May 1, 2024

ಸೈಕಲ್​ ಸವಾರನಿಗೆ ಕಾರು ಡಿಕ್ಕಿ: ಸೈಕಲ್​ ಸವಾರ ದಾರುಣ ಸಾವು!

ಹಾಸನ : ಸೈಕಲ್​ ಸವಾರನಿಗೆ ಕಾರು ಡಿಕ್ಕಿಯಾಗಿ ಸೈಕಲ್​ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಹಾಸನ ನಗರದ ಡೈರಿ ಸರ್ಕಲ್​ ಬಳಿ ನಡೆದಿದೆ.

ಶ್ರೀರಾಮನಗರದ ನಿವಾಸಿ ಆನಂದ್​ (60) ಮೃತ ವ್ಯಕ್ತಿ, ಕಾಟಿಹಳ್ಳಿ ಕಡೆಯಿಂದ ವೇಗವಾಗಿ ಬಂದ KA-13-Z-5180 ನಂಬರ್​ ಪ್ಲೇಟ್​ ಉಳ್ಳ ಹೂಂಡೈ ವೆನ್ಯೂ ಕಾರು, ತಿರುವಿನಲ್ಲಿ ಸೈಕಲ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸೈಕಲ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ : ರಾಜ್ಯದಲ್ಲಿ ಕೇಂದ್ರ ಬಿಜೆಪಿ ನಾಯಕರು ಟಿಕಾಣಿ!

ಈ ಘಟನೆಯೂ ಹಾಸನ ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES