Wednesday, May 1, 2024

ಡಿಕೆ ಶಿವಕುಮಾರ್​ ಸಿಎಂ ಆಗಲು ಲಿಂಗಾಯತ ಸ್ವಾಮೀಜಿ ಬಳಿ ಮಾತುಕತೆ ನಡೆಸಿದ್ದಾರೆ: ಯತ್ನಾಳ್​

ವಿಜಯಪುರ : ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ವ್ಯವಸ್ಥಿತವಾಗಿ ತಯಾರಿ ಮಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಹೊಸ ಬಾಂಬ್​ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಲು ನಮಗೆ ಲಿಂಗಾಯತರು ಸಪೋರ್ಟ್​ ಮಾಡಬೇಕು ಎಂದು ಡಿಕೆ ಶಿವಕುಮಾರ್ ಅವರು ಒಬ್ಬ ಸ್ವಾಮೀಜಿ ಬಳಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದರು.

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾದ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡಿಕೊಂಡು.  ಚುನಾವಣೆ ಮುಗಿದ 15 ದಿನದಲ್ಲೇ ಸಿಎಂ ಆಗುವ ಕನಸು ಡಿ.ಕೆ ಶಿವಕುಮಾರ್ ಕಾಣುತ್ತಿದ್ದಾರೆ. ಇದಕ್ಕೆ ಪೂರಕಾಗಿ ಲಿಂಗಾಯತರು ಒಕ್ಕಲಿಗರು ಒಂದು ಎಂಬ ಸಂದೇಶ ಕೊಡಲು ಒಬ್ಬ ಸ್ವಾಮಿಜಿಗಳು ಪ್ರಯತ್ನ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಸೇರ್ಪಡೆಗೊಂಡ ಅಖಂಡ ಶ್ರೀನಿವಾಸ್​ ಮೂರ್ತಿ

ಶಿವಾನಂದ ಪಾಟೀಲ ಅವರ ಮಗಳನ್ನು ಗೆಲ್ಲಿಸಿದರೆ, ಶಿವಾನಂದ ಪಾಟೀಲ ಹಾಗೂ ನಾನು ಸೇರಿ ಎಲ್ಲ ಸಿದ್ದರಾಮಯ್ಯ ನವರನ್ನು ಇಳಿಸುವ ಕಾರ್ಯತಂತ್ರ ಮಾಡಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಇನ್ನೂ ಒಡೆದು ಹೋಗಿ ಹೊಸ ಸರ್ಕಾರ ರಚನೆಯಾಗುತ್ತದೆ ಎಂದರು.

ಡಿ ಕೆ ಶಿವಕುಮಾರ್ ಪರವಾದ ಬಾಗಲಕೋಟೆ ಶಿವಾನಂದ ಪಾಟೀಲ್​, ಧಾರವಾಡದಲ್ಲಿ ಕೆಲವರು, ಬೆಳಗಾವಿಯ ಲೋಕಸಭಾ ಅಭ್ಯರ್ಥಿ, ಇವರೆಲ್ಲರನ್ನು ಸೋಲಿಸದಿದ್ದರೆ ನಿಮ್ಮ ಮುಖ್ಯಮಂತ್ರಿ ಹುದ್ದೆ ಹೋಗುವದು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯನವರು ಇದೇ ವೇಳೆ ಎಚ್ಚರಿಕೆಯ ಸಂದೇಶವನ್ನು ನೀಡಿದರು. ಇದೇ ವೇಳೆ ಕಾಂಗ್ರೆಸ್​ ಸರ್ಕಾರ ಘೋಷಣೆ ಮಾಡಿರಿವ ಐದು ಗ್ಯಾರಂಟಿ ಗಳ ಜೊತೆಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಹೋಗುವದು ಇದೊಂದು ಗ್ಯಾರಂಟಿ ಎಂದು ಎಚ್ಚರಿಸಿದರು.

RELATED ARTICLES

Related Articles

TRENDING ARTICLES