ಬೆಂಗಳೂರು : ನನ್ನನ್ನ ಚಿತ್ರರಂಗಕ್ಕೆ ಪರಿಚಯಿಸಿದವರು ದ್ವಾರಕೀಶ್. ಸುಮ್ನೆ ಪರಿಚಯ ಮಾಡಿಲ್ಲ, ಇವ್ನು ‘ಡ್ಯಾನ್ಸ್ ರಾಜ ಡ್ಯಾನ್ಸ್’ ಅಂತ ತೋರಿಸಿ ಕೊಟ್ಟವರು ಎಂದು ನಟ ವಿನೋದ್ ರಾಜ್ ಹೇಳಿದ್ದಾರೆ.
ದ್ವಾರಕೀಶ್ ಪಾರ್ಥಿವ ಶರೀರ ದರ್ಶನ ಪಡೆದ ಬಳಿಕ ಮಾತನಾಡಿ, ಕರ್ನಾಟಕದ ರಾಜ, ಗುರು ಸ್ಥಾನದಲ್ಲಿರುವ ವ್ಯಕ್ತಿ. ನಾನೊಬ್ಬನನ್ನೇ ಅಲ್ಲ, ಅನೇಕ ಕಲಾವಿದರನ್ನ ಪರಿಚಯಿಸಿದವರು ಎಂದು ತಿಳಿಸಿದ್ದಾರೆ.
ಕಪ್ಪು ಬಿಳುಪಿನ ಕಾಲದಿಂದ ತಂತ್ರಜ್ಞಾನ ಮುಂದುವರಿದ ಕಾಲದವರೆಗೂ ಅವರ ಸಾಧನೆ ಅವಿಸ್ಮರಣೀಯ. ಅವರು ಒಬ್ಬ ಕರ್ನಾಟಕದ ದಿಗ್ಗಜ. ಮೇರು ಹಾಸ್ಯ ನಟ, ಶ್ರೇಷ್ಠ ವ್ಯಕ್ತಿ. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮಕ್ಕಳ ಮನಸ್ಸಿಗೆ ಧೈರ್ಯ ತುಂಬಲಿ ಎಂದು ಪ್ರಾರ್ಥಿಸಿದ್ದಾರೆ.
ತಂದೆ ಮನಸ್ಸಿಗೆ ನೋವಾಗದ ರೀತಿಯಲ್ಲಿ ಅವರ ಮಗ ಬದುಕಲಿ. ಮತ್ತೊಂದು ಬಾರಿ ಈ ತರಹದ ವ್ಯಕ್ತಿತ್ವದ ಮನುಷ್ಯ ಜನಿಸೋಕೆ ಸಾಧ್ಯವಿಲ್ಲ. ನಾವಿವತ್ತು 2 ರಿಂದ 3 ಭಾಷೆ ಅಂತೀವಿ. ಹಣದ ಅಭಾವ ಇದ್ದ ಆ ಕಾಲದಲ್ಲೇ ದೊಡ್ಡ ದೊಡ್ಡ ಸಿನಿಮಾ ಮಾಡಿದ್ದಾರೆ. ಅವರ ನಿರ್ದೇಶನ, ನಿರ್ಮಾಣದಿಂದ ಇಷ್ಟು ವರ್ಷ ಹೆಸರು ಉಳಿಸಿಕೊಂಡು ಬಂದಿದ್ದಾರೆ. ಅವರು ಕೊಟ್ಟಿರುವ ಕೊಡುಗೆಯನ್ನ ದಾರಿದೀಪ ಅಂದು ಕೊಳ್ಳೋಣ ಎಂದು ನಟ ವಿನೋದ್ ರಾಜ್ ಹೇಳಿದ್ದಾರೆ.