ಶನಿ ಮಂಗಳರ ಯುತಿ ಯೋಗದಲ್ಲಿ ನಡೆಯುತ್ತಿರುವ ಈ ಸೌರ ಯುಗಾದಿಯಿಂದ ಜಾಗತಿಕವಾಗಿ ಮತ್ತು ಭಾರತದ ಮೇಲೆ ಆಗಲಿರುವ ಪ್ರತಿಕೂಲ ಪರಿಣಾಗಳ ಕುರಿತು ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ಪ್ರಪಂಚದಾದ್ಯಂತ ಯುದ್ದ ಭೀತಿಗಳು ಹೆಚ್ಚಾಗಲಿದ್ದು ಇಸ್ರೇಲ್ ವಿರುದ್ದ ಇರಾಕ್ ಯುದ್ದ ಸಾರಲಿದೆ. ಅಮೇರಿಕಾ ದೇಶವು ಆರ್ಥಿಕ ನಷ್ಟಕ್ಕೆ ಸಿಲುಕಲಿದೆ, ಅಮೇರಿಕಾ ವಿರುದ್ದ ಅನೇಕ ರಾಷ್ಟ್ರಗಳು ಯುದ್ದ ಸಾರುವ ಸಾಧ್ಯತೆ ಇದೆ. ಅಷ್ಟೆ ಅಲ್ಲದೇ ಭಾರತದ ವಿರುದ್ದ ಶತ್ರು ರಾಷ್ಟ್ರಗಳು ಸಂಚು ರೂಪಿಸುತ್ತಿದ್ದು ಸೇನಾ ಬಲ ರಕ್ಷಣಾ ಇಲಾಖೆ ಎಚ್ಚರದಿಂದ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ಇನ್ನು ರಾಜ್ಯದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಅನೇಕ ಶತ್ರುಗಳಿಂದ ತೊಂದರೆಗಳು ಉಂಟಾಗಲಿದೆ ಎಂದು ಶ್ರೀಗಳು ಎಚ್ಚರಿಕೆ ಕೊಟ್ಟಿದ್ದಾರೆ.