Thursday, May 9, 2024

ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ. ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರೋದು ನನ್ನ ಗುರಿ. ನನ್ನ ಗುರಿ ನಿಜವಾಗಿಯೂ ಕಲ್ಯಾಣ ಕರ್ನಾಟಕ ಮಾಡೋದು ಎಂದು ತಿಳಿಸಿದರು.‌

ನನ್ನ ಗುರಿ ಬಸವಣ್ಣನ ತತ್ವ ಉಳಿಯಬೇಕು ಅನ್ನೋದು. ನನ್ನ ಗುರಿ ಅಂಬೇಡ್ಕರ್ ಸಂವಿಧಾನ ಉಳಿಸೋದು‌. ನನ್ನ ಗುರಿ ಒಂದೇ ರಾಧಾಕೃಷ್ಣ, ಕಾಂಗ್ರೆಸ್ ಎಲೆಕ್ಷನ್ ಅಲ್ಲ. ದೇಶದ ಸಂವಿಧಾನ ಉಳಿಸೋದು‌. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಮಷಿನರಿ ಬಳಸಿಕೊಂಡು ಪ್ರಜಾಪ್ರಭುತ್ವ ಹಾಳು ಮಾಡ್ತಿದ್ದಾರೆ ಎಂದು ದೂರಿದರು.

ಯಜಮಾನಿಗೆ ಒಂದು ಲಕ್ಷ ಕೊಡ್ತೀವಿ

ಮನೆ ಯಜಮಾನಿಗೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ಇದು ನಮ್ಮ ಗ್ಯಾರಂಟಿ. ಅಪ್ರೇಂಟಿಸ್ ಕೆಲಸ ಮಾಡುವ ಯುವಕರಿಗೆ ಒಂದು ಲಕ್ಷ ವೇತನ ಕೊಡುತ್ತೇವೆ. ಒಟ್ಟು 25 ಗ್ಯಾರಂಟಿಗಳಿವೆ, ಅದನ್ನು ನಾವು ಮಾಡಿ ತೊರಿಸುತ್ತೇವೆ ಎಂದು ಭರವಸೆ ನೀಡಿದರು.

ರಾಧಾಕೃಷ್ಣರಿಗೆ ಮತ ಕೊಟ್ಟು ನೋಡಿ

ನಾನು ಏನು ಮಾಡಿದ್ದೇನೆ ಅಂತ ನೀವು ಅರ್ಥ ಮಾಡಿಕೊಂಡಿದ್ದಿರಾ..? ಆದ್ರೆ, ಮತಗಟ್ಟೆಗೆ ಹೋದಾಗ ಏನು ಅನಿಸುತ್ತೋ ಆಗುತ್ತೋ ಗೊತ್ತಿಲ್ಲ. ಕಾಂಗ್ರೆಸ್​ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ಕೊಟ್ಟು ನೋಡಿ, ಮುಂದಿನ ಐದು ವರ್ಷದಲ್ಲಿ ಏನು ಬದಲಾವಣೆ ಆಗುತ್ತದೆ ಅಂತನೂ ನೋಡಿ ಎಂದು ಅಳಿಯನ ಪರ ಮಲ್ಲಿಕಾರ್ಜುನ ಖರ್ಗೆ ಮತಯಾಚನೆ ಮಾಡಿದರು.

RELATED ARTICLES

Related Articles

TRENDING ARTICLES