Thursday, May 9, 2024

ಗುಡುಗು ಸಿಡಿಲು ಸಿದ್ರಾಮಯ್ಯಗೆ, ಮಳೆ ಹನಿ ಮೋದಿಗೆ : ಬಸವರಾಜ ಬೊಮ್ಮಾಯಿ

ಗದಗ : ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಿರೇಹಾಳ ಗ್ರಾಮದಲ್ಲಿ ಮತಯಾಚನೆ ಮಾಡಿದರು.

ಮತಯಾಚನೆ ಸಂದರ್ಭದಲ್ಲೇ ಮಳೆರಾಯನ ಆಗಮನವಾಯಿತು. ಈ ವೇಳೆ ಮಾತನಾಡಿದ ಅವರು, ಊರಲ್ಲಿ ಮಳೆ ಬಂದಿರುವುದು ಶುಭ ಸೂಚನೆ ಎಂದು ಅಭಿಪ್ರಾಯಪಟ್ಟರು.

ಗುಡುಗು ಸಿಡಿಲು ಕಾಂಗ್ರೆಸ್​ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ. ಮಳೆ ಹನಿ ನರೇಂದ್ರ ಮೋದಿಗೆ. ಕಾಂಗ್ರೆಸ್ ಪಕ್ಷದ್ದು ಮೂರು ಗ್ಯಾರಂಟಿ ಜೊತೆಗೆ, ಬರಗಾಲ ಗ್ಯಾರಂಟಿ. ಕಾಂಗ್ರೆಸ್ ಬಂದ್ರೆ ಬರಗಾಲ ಗ್ಯಾರಂಟಿ, ಭ್ರಷ್ಟಾಚಾರ ಗ್ಯಾರಂಟಿ. ಮಳೆ ಬರುವ ಲಕ್ಷಣ ಅಂದ್ರೆ ಮೋದಿ ಸರಕಾರ, ಬಿಜೆಪಿ ಸರಕಾರ ಎಂದು ಹೇಳಿದರು.

ನಿಮ್ಮೂರಿಗೆ ಬಂದು ನಿಮ್ಮ ಜೊತೆಗಿರುತ್ತೇನೆ

ನಾನು ಮತ್ತೊಮ್ಮೆ ನಿಮ್ಮೂರಿಗೆ ಬಂದು ನಿಮ್ಮ ಜೊತೆಗಿರುತ್ತೇನೆ. ಭಾಷಣ ಮಾಡಿ, ನಿಮ್ಮ ಸಮಸ್ಯೆಗಳನ್ನು ಆಲಿಸ್ತೇನೆ. ನಿಮ್ಮೂರಲ್ಲೇ ಚಹಾ ಕುಡೀತೇನೆ ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಬೊಮ್ಮಾಯಿ ಪ್ರಚಾರಕ್ಕೆ ಮಾಜಿ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.

RELATED ARTICLES

Related Articles

TRENDING ARTICLES