Friday, May 3, 2024

ಮೋದಿ ಹವಾ ಇಲ್ಲ, ಸಿದ್ದರಾಮಯ್ಯ ಹವಾ ಇದೆ : ಸತೀಶ್ ಜಾರಕಿಹೊಳಿ

ಚಿಕ್ಕೋಡಿ : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹವಾ ಇದೆ, ಪ್ರಧಾನಿ ಮೋದಿ ಅವರ ಹವಾ ಇಲ್ಲ. ಮೋದಿ ಅವರ 10 ವರ್ಷದ ವೈಫಲ್ಯಗಳನ್ನ ಜನರಿಗೆ ಹೇಳಬೇಕು ಎಂದು ಮೋದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಹರಿಹಾಯ್ದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುತ್ರಿ ಪ್ರಿಯಾಂಕಾ ಪರ ಮತಯಾಚನೆ ಮಾಡಿದರು. ಈ ವೇಳೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಮೋದಿ ಅವರ 10 ವರ್ಷದ ಭಾಷಣಗಳನ್ನ ಜನರಿಗೆ ತೋರಿಸಬೇಕು. ನದಿ ಜೋಡಣೆ, ಬುಲೆಟ್ ಟ್ರೇನ್ ಬರಲಿಲ್ಲ. 15 ಲಕ್ಷ ಬರಲಿಲ್ಲ, ರೈತರ ಆದಾಯ ಡಬಲ್ ಆಗಲಿಲ್ಲ. ಬಿಜೆಪಿ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ . ಬಿಜೆಪಿ ವೈಫಲ್ಯಗಳನ್ನ ಜನರಿಗೆ ತಿಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರಿಯಾಂಕಾ ಅವರಿಗೆ ಆಶೀರ್ವಾದ ಮಾಡಿ

ಪ್ರಿಯಾಂಕಾ ಅವರಿಗೆ ಆಶೀರ್ವಾದ ಮಾಡಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ. ಉಚಿತ ಗ್ಯಾರಂಟಿ ಯೋಜನೆಗಳನ್ನ ಮನೆ ಮನೆ ಮುಟ್ಟಿಸಬೇಕು. ಎಲ್ಲ ಪಕ್ಷದ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಒದಗಿಸಲಾಗಿದೆ. ಪಕ್ಷಾತೀತವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದರು.

RELATED ARTICLES

Related Articles

TRENDING ARTICLES