Wednesday, May 8, 2024

ಡಾ. ಮಂಜುನಾಥ್ ಜನ ಮೆಚ್ಚಿದ ಮಗ : ಅಶ್ವತ್ಥ ನಾರಾಯಣ್

ಬೆಂಗಳೂರು : ಡಾ. ಮಂಜುನಾಥ್ ಅವರು ಜನ ಮೆಚ್ಚಿದ ಮಗ. ಯಾರೂ ಕೂಡ ಅಂದುಕೊಂಡಿರಲಿಲ್ಲ. ಡಿಕೆ ಬ್ರದರ್ಸ್ ಕೂಡ ಅಂದುಕೊಂಡಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹಿಂದೆ ಒಂದೇ ಲೋಕಸಭಾ ಕ್ಷೇತ್ರ ಗೆದ್ದಿದೆ. ಅವರಿಂದ ಅದೊಂದು ಕ್ಷೇತ್ರದಿಂದ ಏನೂ ಆಗಲ್ಲ. ಹಾಗಾಗಿ, ಈ ಬಾರಿ ಬಿಜೆಪಿ ಗೆದ್ದರೆ ಉತ್ತಮ ಎಂದು ಕುಟುಕಿದರು.

ಡಾ. ಮಂಜುನಾಥ್ ಅವರಂಥ ಒಳ್ಳೆಯ ವ್ಯಕ್ತಿಗಳು ಬರಬೇಕಾಗಿದೆ. ಪ್ರಧಾನಿ ಮೋದಿ ಟೀಂನಲ್ಲಿ ಯೋಗ್ಯವಾದ ವ್ಯಕ್ತಿ ಇರಬೇಕು. ಅದರಲ್ಲಿ ಮಂಜುನಾಥ್ ಕೂಡ ಒಬ್ಬರು. ಪ್ರಕೃತಿ ಆಶೀರ್ವಾದವೂ ಕೂಡ ಮಂಜುನಾಥ್ ಅವರಿಗೆ ಇದೆ. ನಮಗ್ಯಾರು ರಾಜಕೀಯಕ್ಕೆ ಆಹ್ವಾನ ಕೊಟ್ಟಿರಲಿಲ್ಲ. ಆದರೆ, ಮಂಜುನಾಥ್​ ಅವರಿಗೆ ಒತ್ತಡ ಇತ್ತು ರಾಜಕೀಯಕ್ಕೆ ಬರೋದಕ್ಕೆ ಎಂದು ತಿಳಿಸಿದರು.

ನಾವು ದ್ವೇಷ ರಾಜಕಾರಣ ಮಾಡಲ್ಲ

ಬೆಂಗಳೂರು ಗ್ರಾಮಾಂತರದಲ್ಲಿ ಉಸಿರು ಗಟ್ಟಿಸುವ ವಾತಾವರಣ ಇತ್ತು. ಅದನ್ನ ಬದಲಾಯಿಸಬೇಕಾದ್ರೆ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಅವರ ಗೆಲುವು ಆಗಬೇಕಿದೆ. ನಾವು ದ್ವೇಷ, ಅಸೂಯೆ ರಾಜಕಾರಣ ಮಾಡಲು ಬಂದಿಲ್ಲ. ಭಾರತೀಯ ಜನತಾ ಪಾರ್ಟಿ ಸಿದ್ದಾಂತ ಜನಪರವಾಗಿ ಇದೆ. ಭ್ರಷ್ಟಾಚಾರ ನಿರ್ಮೂಲನೆಯೇ ಬಿಜೆಪಿ ಮುಖ್ಯ ಎಂದು ಹೇಳಿದರು.

ಮೋದಿ ಅವರು ಭರವಸೆಯ ನಾಯಕ

ಯುಗಾದಿ ಹಬ್ಬದ ಈ ಸಂಧರ್ಭದಲ್ಲಿ ಧರ್ಮ ಅಧರ್ಮದ ಯುದ್ದ ನಡೀತಾ ಇದೆ. 10 ವರ್ಷದಲ್ಲಿ ವೇಗದ ಅಭಿವೃದ್ಧಿ ಆಗ್ತಾ ಇದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗೋದನ್ನ ಜನ ಎದುರು ನೋಡ್ತಾ ಇದ್ದಾರೆ. ಖಂಡಿತವಾಗಿಯೂ ಅವರು ಮೂರನೇ ಬಾರಿ ಪಿಎಂ ಆಗ್ತಾರೆ. ಭರವಸೆಯ ಸರ್ಕರ ಬರಬೇಕಾಗಿದೆ. ಮೋದಿ ಅವರು ಭರವಸೆಯ ನಾಯಕ. ಇದೊಂದು ದೇಶದ ಚುನಾವಣೆಯಾಗಿದೆ. ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಾಗಿದೆ. ಕರ್ನಾಟಕ ಹೆಚ್ಚು ಪ್ರಾಬಲ್ಯ ಪಡಿಯಬೇಕಾಗಿದೆ ಎಂದು ಅಶ್ವತ್ಥ ನಾರಾಯಣ್ ತಿಳಿಸಿದರು.

RELATED ARTICLES

Related Articles

TRENDING ARTICLES