Wednesday, May 1, 2024

ಮಾಧುಸ್ವಾಮಿ ಬೆಂಬಲ ಭಗವಂತನ ದಯೆ : ವಿ. ಸೋಮಣ್ಣ

ತುಮಕೂರು : ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇತ್ತ ತುಮಕೂರಿನಲ್ಲಿ ಜನರ ಚಿತ್ತ ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರತ್ತ ನೆಟ್ಟಿದೆ.

ನಿನ್ನೇಯಷ್ಟೇ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರು ಜೆ.ಸಿ. ಮಾಧುಸ್ವಾಮಿ ಮನೆಗೆ ಭೇಟಿ ನೀಡಿ ಬೆಂಬಲ ಕೋರಿದ್ದಾರೆ. ಇದು ಬಿಜೆಪಿಗರಲ್ಲಿ ತಳಮಳ ಉಂಟುಮಾಡಿದೆಯಲ್ಲದೇ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ವಿಚಾರದಲ್ಲಿ ಇಂದು ತುಮಕೂರಿನಲ್ಲಿ ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು, ಮಾಧುಸ್ವಾಮಿ ಬೆಂಬಲ ನೀಡೋದು ದೇವರ ದಯೆ. ಪಕ್ಷ ಈಗಾಗಲೇ ಅವರ ಜೊತೆ ಮಾತನಾಡಿದ ಅವರ ಬೆಂಬಲಿಗರನ್ನ ಕರೆದು ಸಹ ಮಾತನಾಡಿದೆ. ನನಗೆ ಕೆಲಸ ಮಾಡ್ತಾರೆ ಎಂದರು.

ಮಾಧುಸ್ವಾಮಿಗೆ ಇರುವ ತಿಳುವಳಿಕೆ ನಮಗಿಲ್ಲ

ವೈಯಕ್ತಿಕವಾಗಿ ಒಬ್ಬ ವ್ಯಕ್ತಿಯನ್ನ ಇನ್ನೊಬ್ಬ ವ್ಯಕ್ತಿ ಭೇಟಿಯಲ್ಲಿ ತಪ್ಪಿಲ್ಲ. ವಿಶ್ವಾಸ ಇದೆ ಭೇಟಿ ಮಾಡಿರ್ತಾರೆ, ವೋಟು ಕೇಳೋಕೆ ಹೋಗಿರುತ್ತಾರೆ. ಮಾಮೂಲಿ, ಸ್ವಾಭಾವಿಕ ಬೆಂಬಲ ಕೋರಿರುತ್ತಾರೆ. ಮಾಧುಸ್ವಾಮಿ ಮತ್ಸದ್ಧಿ ರಾಜಕಾರಣಿ, ಅವರಿಗೆ ಹಾಗು ಹೋಗುಗಳ ಬಗ್ಗೆ ಗೊತ್ತಿದೆ. ದೇಶದ ಬಗ್ಗೆ, ರಾಜ್ಯದ ಬಗ್ಗೆ ಮಾಧುಸ್ವಾಮಿಗೆ ಇರುವ ತಿಳುವಳಿಕೆ ನಮಗಿಲ್ಲ ಎಂದು ಸೋಮಣ್ಣ ಹೇಳಿದರು.

RELATED ARTICLES

Related Articles

TRENDING ARTICLES