Thursday, May 9, 2024

ಬೆಂಗಳೂರಿನ ಸಮಸ್ಯೆಗಳಿಗೆ ನಾವೇ ಪರಿಹಾರ ಕೊಡಬೇಕು,ದೆಹಲಿಯಿಂದ ಯಾರೂ ಬರಲ್ಲ: ಡಿ.ಕೆ ಶಿವಕುಮಾರ್​

ಬೆಂಗಳೂರು: ಬೆಂಗಳೂರಿನ ಸಮಸ್ಯೆಗಳಿಗೆ ನಾವೇ ಪರಿಹಾರ ಕೊಡಬೇಕು,ದೆಹಲಿಯಿಂದ ಯಾರೂ ಬರಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನೇ ಮಹದಾಯಿ ಮಾಡ್ತೀನಿ ಅಂತಾ ಕುಮಾರಸ್ವಾಮಿ ಹೇಳ್ತಿದ್ದಾರೆ.ಇತ್ತಲ್ಲ ಅವ್ರ ಕೈಯಲ್ಲಿ ಅಧಿಕಾರ, ಇದ್ದಾಗ ಏನೂ ಮಾಡೋಕೆ ಆಗಲಿಲ್ಲ.ನಾನು ಮೇಕೆದಾಟು ಯೋಜನೆ ಶುರು ಮಾಡಿದಾಗ ನಗ್ತಾ ಇದ್ರು.ಬಿರಿಯಾನಿ ಕೊಟ್ಕೊಂಡು,ಕಬಾಬ್ ತಿಂತಾ ಇದ್ರು ಅಂದ್ರುಅವ್ರ ಸ್ಟೇಟ್ ಮೆಂಟ್ ಎಲ್ಲಾ ತೆಗೀರಿ.ಕಬಾಬ್ ತಿಂತಾ ಇದ್ವಾ ನಾವು ಎಷ್ಟು ನಡೆದಿದ್ದೀನಿ, ಎಷ್ಟು ಹೋರಾಟ ಮಾಡಿದ್ದೀನಿ.ಯಾರಿಗೋಸ್ಕರ ಮಾಡ್ತಿದ್ದೀನಿ, ರಾಜ್ಯದ ಜನಕ್ಕೋಸ್ಕರ ನಮ್ಮ ಹೋರಾಟವನ್ನ ಪಾಪ ಅವ್ರ ಕೈಯಲ್ಲಿ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಹೆಚ್​.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದರು.

ನಾನು ಏನ್ ಮಾತಾಡ್ತೀನೋ ಅದರಂತೆ ನಡೆದುಕೊಳ್ತೀನಿ.ಜನರಿಗೂ ನನ್ನ ಬಗ್ಗೆ ವಿಶ್ವಾಸ ಇದೆ.ಜಲಸಂಪನ್ಮೂಲ,ಬೆಂಗಳೂರು ನಗರ ಸಚಿವನಾಗಿರೋದು ನಾನು ಇದಕ್ಕೆ ಎಂದರು.

RELATED ARTICLES

Related Articles

TRENDING ARTICLES