ಬೆಂಗಳೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಕುರಿತು ಸಿದ್ಧಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠ) ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಎರಡು ದಿನಗಳ ಹಿಂದೆಯಷ್ಟೇ ನುಡಿದಿದ್ದ ಭವಿಷ್ಯ ಇದೀಗ ನಿಜವಾಗಿದೆ.
ಕ್ರೋಧಿ ನಾಮ ಸಂವತ್ಸರದ ವಿಶೇಷತೆ ಹಾಗೂ ಸಂವತ್ಸರದ ಫಲಗಳ ಬಗ್ಗೆ ಶ್ರೀಗಳು ಪವರ್ ಟಿವಿಗೆ ಮಾಹಿತಿ ನೀಡಿದ್ದರು. ಈ ವೇಳೆ ನಟ ದರ್ಶನ್ ಅವರಿಗೆ ಹೆಚ್ಚು ಅನಾಹುತಗಳು ಕಾದಿವೆ ಎಂದು ಅಚ್ಚರಿ ಹೇಳಿಕೆ ನೀಡಿದ್ದರು. ನಟ ದರ್ಶನ್ ಅವರಿಗೆ ಈ ವರ್ಷ ಶತ್ರುಗಳಿಂದ ತೊಂದರೆ ಉಂಟಾಗಲಿದೆ ಎಂದು ಸಿದ್ಧಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ನಟರಾದ ದರ್ಶನ್ ತೂಗುದೀಪ ಅವರು ಬಹಳ ಕಷ್ಟದಿಂದ ಮೇಲೆ ಬಂದಿದ್ದಾರೆ. ಅವರ ಪ್ರತಿಭೆ, ಅವರು ಪಡೆದಿರುವ ಪ್ರಖ್ಯಾತಿ ಹಾಗೂ ಅವರು ಸಂಪಾಧಿಸಿರುವ ಅಭಿಮಾನಿ ಬಳಗ ನಮ್ಮೆಲ್ಲರಿಗೂ ಸಂತೋಷದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀಗಳು ಮನದುಂಬಿ ಶ್ಲಾಘಿಸಿದ್ದರು.
ಶ್ರೀಗಳು ನುಡಿದಿದ್ದ ಭವಿಷ್ಯ ಏನು?
ಮುಂದುವರಿದು, ಈ ವರ್ಷ ನಟ ದರ್ಶನ್ ಅವರಿಗೆ ಶತ್ರುಗಳಿಂದ ಅನೇಕ ರೀತಿಯಿಂದ ತೊಂದರೆ ಉಂಟಾಗಲಿದೆ. ದರ್ಶನ್ ಅವರಿಗೆ ಅನಾರೋಗ್ಯ ಬಾಧೆ ಕೂಡ ಕಾಡಲಿದೆ. ಮಾನಹಾನಿಗಳು, ಅನೇಕ ರೀತಿಯ ದುಷ್ಕೃತ್ಯಗಳ (ಷಡ್ಯಂತ್ರ) ಪ್ರಯೋಗದಿಂದ ದರ್ಶನ್ ಅವರ ನೆಮ್ಮದಿ ಹಾಳಾಗುತ್ತದೆ ಎಂದು ಎಚ್ಚರಿಕೆ ಸಂದೇಶ ನೀಡಿದ್ದರು.
ದರ್ಶನ್ಗೆ ಶ್ರೀಗಳು ನೀಡಿದ್ದ ಸಲಹೆ ಏನು?
ನಟ ದರ್ಶನ್ ಅವರು ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಮತ್ತು ನಿಮ್ಮ ರಕ್ಷಣಾವಲಯವನ್ನು ಹೆಚ್ಚು ಮಾಡುವುದು ಸೂಕ್ತ ಎಂದು ದರ್ಶನ್ ಅವರಿಗೆ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆಯನ್ನೂ ನೀಡಿದ್ದರು. ಶ್ರೀಗಳು ಹೇಳಿದಂತೆ ಇದೀಗ ದರ್ಶನ್ ಅಭಿಮಾನಿಗಳ ಹೆಸರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿ ಕೃತ್ಯ ನಡೆಸಿದ್ದಾರೆ.