Friday, May 10, 2024

ಕಾಂಗ್ರೆಸ್​ಗೆ ಖಾಲಿ ಗೂಟ ಅಲ್ಲ, ಹಾಕಿದ್ರೆ ಬಗಣಿ ಗೂಟ ಹಾಕಬೇಕು : ಸಿ.ಟಿ. ರವಿ

ಮಂಗಳೂರು : ನಿನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಡುಪಿಯಲ್ಲಿ ಹೇಳಿದ್ರು. ಉಡುಪಿಗೆ ಕೋಟ, ಮಂಗಳೂರಿಗೆ ಚೌಟ ಕಾಂಗ್ರೆಸ್​ಗೆ ಗೂಟ ಅಂತ. ಅದು ಖಾಲಿ ಗೂಟ ಅಲ್ಲ, ಹಾಕಿದ್ರೆ ಬಗಣಿ ಗೂಟ ಹಾಕಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಕುಟುಕಿದರು.

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಕೇಸರಿ ಶಾಲು ಜೋರಾಗಿ ಬೀಸಿ. ಇಲ್ಲಿರೋದು ಕೇಸರಿ ಗಾಳಿ, ಹಿಂದುತ್ವದ ಗಾಳಿ ಎಂದು ಕರೆ ಕೊಟ್ಟರು.

ಜೂನ್ 4ರಂದು ಫಲಿತಾಂಶ ಕಂಡು ಕಾಂಗ್ರೆಸ್ ನಾಯಕರು ಪರ್ಮನೆಂಟ್ ಆಗಿ ಎದೆ ಹೊಡ್ಕೋಬೇಕು. ಎಸ್​ಡಿಪಿಐ, ಪಿಎಫ್ಐ ಬೆಂಬಲ ಕೊಟ್ಟಿದ್ದು ಕಾಂಗ್ರೆಸ್ ಪಕ್ಷಕ್ಕೆ. ಮತ್ತೆ ಅವಕಾಶ ಕೊಟ್ರೆ ಜಿಲ್ಲಾ ಪಂಚಾಯತ್​ನಿಂದ ಪಾರ್ಲಿಮೆಂಟ್​ವರೆಗೂ ಪಾಕಿಸ್ತಾನ ಜಿಂದಾಬಾದ್ ಕೂಗು ಕೇಳಿಸುತ್ತೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.

ಕಾಂಗ್ರೆಸ್ ಗೆಲುವನ್ನ ಪಾಕಿಸ್ತಾನ ಸಂಭ್ರಮಿಸುತ್ತೆ

ಕಾಂಗ್ರೆಸ್ ಗೆಲುವನ್ನ ಪಾಕಿಸ್ತಾನ ಸಂಭ್ರಮಿಸುತ್ತದೆ. ಅದಕ್ಕೆ ಕಾಂಗ್ರೆಸ್​ನವರು ಪಾಕಿಸ್ತಾನ ಜಿಂದಾಬಾದ್ ಅಂತಾರೆ. ಇದು ಜಾತಿ ಉಳಿಸೋ ಚುನಾವಣೆಯಲ್ಲ, ದೇಶ ಉಳಿಸೋ ಚುನಾವಣೆ. ದೇಶ ಉಳಿದ್ರೆ ನೀನು, ನಾನು, ನಮ್ಮ ಜಾತಿ. ದೇಶವೇ ಇಲ್ಲದಿದ್ರೆ ನೀನು ಇಲ್ಲ, ನಿನ್ನ ಜಾತಿನೂ ಇಲ್ಲ ಎಂದು ಸಿ.ಟಿ. ರವಿ ಮತದಾರರಿಗೆ ಎಚ್ಚರಿಸಿದರು.

RELATED ARTICLES

Related Articles

TRENDING ARTICLES