ಮಂಗಳೂರು : ನಿನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಡುಪಿಯಲ್ಲಿ ಹೇಳಿದ್ರು. ಉಡುಪಿಗೆ ಕೋಟ, ಮಂಗಳೂರಿಗೆ ಚೌಟ ಕಾಂಗ್ರೆಸ್ಗೆ ಗೂಟ ಅಂತ. ಅದು ಖಾಲಿ ಗೂಟ ಅಲ್ಲ, ಹಾಕಿದ್ರೆ ಬಗಣಿ ಗೂಟ ಹಾಕಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಕುಟುಕಿದರು.
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಕೇಸರಿ ಶಾಲು ಜೋರಾಗಿ ಬೀಸಿ. ಇಲ್ಲಿರೋದು ಕೇಸರಿ ಗಾಳಿ, ಹಿಂದುತ್ವದ ಗಾಳಿ ಎಂದು ಕರೆ ಕೊಟ್ಟರು.
ಜೂನ್ 4ರಂದು ಫಲಿತಾಂಶ ಕಂಡು ಕಾಂಗ್ರೆಸ್ ನಾಯಕರು ಪರ್ಮನೆಂಟ್ ಆಗಿ ಎದೆ ಹೊಡ್ಕೋಬೇಕು. ಎಸ್ಡಿಪಿಐ, ಪಿಎಫ್ಐ ಬೆಂಬಲ ಕೊಟ್ಟಿದ್ದು ಕಾಂಗ್ರೆಸ್ ಪಕ್ಷಕ್ಕೆ. ಮತ್ತೆ ಅವಕಾಶ ಕೊಟ್ರೆ ಜಿಲ್ಲಾ ಪಂಚಾಯತ್ನಿಂದ ಪಾರ್ಲಿಮೆಂಟ್ವರೆಗೂ ಪಾಕಿಸ್ತಾನ ಜಿಂದಾಬಾದ್ ಕೂಗು ಕೇಳಿಸುತ್ತೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.
ಕಾಂಗ್ರೆಸ್ ಗೆಲುವನ್ನ ಪಾಕಿಸ್ತಾನ ಸಂಭ್ರಮಿಸುತ್ತೆ
ಕಾಂಗ್ರೆಸ್ ಗೆಲುವನ್ನ ಪಾಕಿಸ್ತಾನ ಸಂಭ್ರಮಿಸುತ್ತದೆ. ಅದಕ್ಕೆ ಕಾಂಗ್ರೆಸ್ನವರು ಪಾಕಿಸ್ತಾನ ಜಿಂದಾಬಾದ್ ಅಂತಾರೆ. ಇದು ಜಾತಿ ಉಳಿಸೋ ಚುನಾವಣೆಯಲ್ಲ, ದೇಶ ಉಳಿಸೋ ಚುನಾವಣೆ. ದೇಶ ಉಳಿದ್ರೆ ನೀನು, ನಾನು, ನಮ್ಮ ಜಾತಿ. ದೇಶವೇ ಇಲ್ಲದಿದ್ರೆ ನೀನು ಇಲ್ಲ, ನಿನ್ನ ಜಾತಿನೂ ಇಲ್ಲ ಎಂದು ಸಿ.ಟಿ. ರವಿ ಮತದಾರರಿಗೆ ಎಚ್ಚರಿಸಿದರು.
“ಮಗದೊಮ್ಮೆ ಮೋದಿ”. ಹಿಂದುತ್ವದ ಭದ್ರಕೋಟೆ. ದಕ್ಷಿಣ ಕನ್ನಡದಲ್ಲಿ ವಿಜಯ ಪತಾಕೆ ಹಾರಿಸಿ ಆಗಿದೆ ಗೆಲುವಿನ ಅಂತರವಷ್ಟೇ ತಿಳಿಯುವುದು ಉಳಿದಿದೆ.
ಇಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ @BJP4India ಅಭ್ಯರ್ಥಿಯಾದ ಶ್ರೀ @CaptBrijesh ಅವರ ಜೊತೆಗೂಡಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಿಂದ ಕೇಸರಿಯ ಹೆದ್ದೆರೆಯಲ್ಲಿ, ವಿಜೃಂಭಣೆಯ ರೋಡ್ ಷೋ… pic.twitter.com/cvhwcRDDQN
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) April 4, 2024