Wednesday, May 8, 2024

ಮುಂದೆ JDS ಇರುತ್ತೆ ಎಂಬುದೇ ಅನುಮಾನ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಮುಂದೆ JDS ಇರುತ್ತೆ ಎಂಬುದೇ ಅನುಮಾನ ಎಂದು ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದ್ದಾರೆ. 

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮುಂದೆ JDS ಇರುತ್ತೆ ಎಂಬುದೇ ಅನುಮಾನ. ಬಿಜೆಪಿ ಏನು ಅಂತ ಮುಂದೆ ಜೆಡಿಎಸ್​ಗೆ ಗೊತ್ತಗುತ್ತೆ.ಬಿಜೆಪಿಯವರು ಹಾಗೇ ಅಡ್ಡಡ್ಡ ಎಳೆದು ಜೆಡಿಎಸ್​ನವರನ್ನು ನೇತಾಕ್ತಾರೆ. ಹಂಗಂಗೆ ಗುಳುಂ.. ಗುಳುಂ ಅಂತ ಬಿಜೆಪಿಯವರು ನುಂಗಿ ಹಾಕ್ತಾರೆ ಎಂದು ಲೇವಡಿ ಮಾಡಿದ್ದರು.

ಬಿಜೆಪಿಗೆ ಜೆಡಿಎಸ್​​ನ ಕುಮಾರಣ್ಣ ಸರೆಂಡರ್ ಮಾಡಿಬಿಟ್ಟವ್ರೆ.ಯಾಕೆ ಕುಮಾರಣ್ಣ ಹಾಗೆ ಮಾಡಿದ್ರೋ ಗೊತ್ತಾಗ್ತಿಲ್ಲ. ಕಾಂಗ್ರೆಸ್ ನವರು ಜೆಡಿಎಸ್ ಗೆ 9 ಸೀಟು ಬಿಟ್ಟು ಕೊಟ್ಟಿದ್ವಿ.ಈಗ ನೋಡಿದ್ರೆ ಜೆಡಿಎಸ್​ಗೆ ಬರೀ 3 ಸೀಟು ಕೊಟ್ಟವ್ರೆ. ಮೂರು ಕಡೆ ಅವರೇ, ಮೊಮ್ಮಗ, ಮಗ, ಅಳಿಯನೇ ಕ್ಯಾಂಡಿಡೇಟು ಅಂತಾ ಹೇಳಿ ವ್ಯಂಗ್ಯ ಮಾಡಿದ್ದರು.

RELATED ARTICLES

Related Articles

TRENDING ARTICLES