Saturday, April 27, 2024

ಹೊಲೆಯ.. ಬಾಯಿ ಬಿಚ್ಚಿದ್ರೆ ನಿನ್ನ ಬಾಯಿಗೆ ಹೊಲಸು ತಿನ್ನಿಸ್ತೀನಿ ಎಂದಿದ್ದಾರೆ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಕೆಲ ದಿನಗಳ ಹಿಂದೆ ನನಗೊಂದು ಲೇಟರ್ ಬಂದಿದೆ. ಅದರಲ್ಲಿ ನನ್ನ ಮತ್ತು ನನ್ನ ಕುಟುಂಬವನ್ನ ಮುಗಿಸ್ತಿನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಜಾತಿ ಹಿಡಿದು ಸುಮ್ಮನೆ ಇರದಿದ್ದರೆ ಇಡೀ ಕುಟುಂಬವನ್ನ ಮುಗಿಸ್ತಿನಿ ಅಂತ ಬರೆದಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರಿಗೆ ಸೋಲಿನ ಆತಂಕ ಶುರುವಾಗಿದೆ. ಅದಕ್ಕಾಗಿ ದಿನಕ್ಕೊಂದು ಸುಳ್ಳು ಸೃಷ್ಟಿ ಮಾಡ್ತಿದಾರೆ. ಬಿಜೆಪಿಯೇ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದೆ. ಚುನಾವಣೆಯಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ಹೊಂಚು ಹಾಕಿದೆ. ನನ್ನ ಹೆಣ ಬಿಳಿಸಿದ್ರು ಪರ್ವಾಗಿಲ್ಲ. ಆದರೆ, ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಿಜೆಪಿ ಪಣತೊಟ್ಟಿದೆ ಎಂದು ಹೇಳಿದರು.

ಹೊಲೆಯ ಬಾಯಿ ಬಿಚ್ಚಿ ಮಾತನಾಡಬೇಡ

ಪತ್ರದಲ್ಲಿ ಎಲ್ಲೇ ಇರು ಏನೇ ಮಾಡು ನಿನಗೆ ಹೊಲೆಯನೇ ಎನ್ನುತ್ತಾರೆ. ಎಂತಹ ವೇಷಭೂಷಣ ಹಾಕು. ಪಂಚಾಮೃತದಿಂದ ಅಭಿಷೇಕ ಮಾಡಿದ್ರು ನಿನ್ನ ಹೊಲೆಯನೇ ಎನ್ನುತ್ತಾರೆ. ಹೊಲೆಯ ಬಾಯಿ ಬಿಚ್ಚಿ ಮಾತನಾಡಬೇಡ. ಬಾಯಿ ಬಿಚ್ಚಿದ್ರೆ ನಿನ್ನ ಬಾಯಿಗೆ (ಹೇ..) ಹೊಲಸು ತಿನ್ನಿಸುತ್ತೇನೆ ಅಂದಿದ್ದಾರೆ. ಇಡೀ ಬಿಜೆಪಿ ನಮ್ಮ ಕುಟುಂಬವನ್ನ ಪದೇ ಪದೆ ಪರ್ಸನಲ್ ಅಟ್ಯಾಕ್ ಮಾಡುತ್ತಿದೆ ಎಂದು ಆರೋಪಿಸಿದರು.

ದಲಿತರಿಗೆ ಬಿಜೆಪಿ ಅವಮಾನ ಮಾಡುತ್ತಿದೆ

ಇಡೀ ದಲಿತ ಸಮುದಾಯಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ. ಈ ಪತ್ರಕ್ಕೆ ಉತ್ತರ ಬಿಜೆಪಿಯವೇ ಕೊಡಬೇಕು. ಈ ಪತ್ರ ಬರೆದವರು ಯಾವ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ? ಈ ಪತ್ರ ಕಲಬುರಗಿಯದಲೇ ಬೆಂಗಳೂರಿನ ವಿಕಾಸಸೌಧದ ನನ್ನ ಕಚೇರಿಗೆ ಪೋಸ್ಟ್ ಮಾಡಲಾಗಿದೆ. ಈ ಅನಾಮಧೇಯ ಪತ್ರದ ಬಗ್ಗೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

RELATED ARTICLES

Related Articles

TRENDING ARTICLES