Thursday, May 9, 2024

ಪ್ರಜ್ವಲ್ ಕಾಮಕೇಳಿ : ಕುಮಾರಸ್ವಾಮಿ ಹೇಳುತ್ತಿದ್ದ ಪೆನ್​ಡ್ರೈವ್ ಇದೆನಾ? : ಶಾಸಕ ಕೆ.ಎಸ್. ಆನಂದ್

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕಾಮಕೇಳಿ ಪ್ರಕರಣದ ಬಗ್ಗೆ ಕಾಂಗ್ರೆಸ್ ಕಡೂರು ಕಾಂಗ್ರೆಸ್​ ಶಾಸಕ ಕೆ.ಎಸ್. ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳುತ್ತಿದ್ದ ಪೆನ್​ಡ್ರೈವ್​ ಇದೆನಾ? ಎಂದು ಪ್ರಶ್ನೆ ಮಾಡಿದರು.

ಪವರ್ ಟಿವಿಯೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಎಲ್ಲಿ ಹೋದರೂ.. ವಿಧಾನಸಭೆ ಅಧಿವೇಶನದಲ್ಲಿ, ಮಾಧ್ಯಮಗಳ ಮುಂದೆ ನನ್ನ ಹತ್ತಿರ ಪೆನ್​ಡ್ರೈವ್​ ಇದೆ. ನನ್ನ ಹತ್ತಿರ ಸಿಡಿ ಇದೆ. ಎಲ್ಲವನ್ನೂ ಹೊರಗೆ ತರುತ್ತೇನೆ ಎನ್ನುತ್ತಿದ್ದರು. ಬಹುಶಃ ಅವರು ಹೊರಗೆ ತಂದಿದ್ದು ಇದೆನಾ? ಸಹೋದರನ ಮಗನ ಕೃತ್ಯನಾ ಹೊರಗೆ ತಂದಿದ್ದು? ಎಂದು ವಾಗ್ದಾಳಿ ನಡೆಸಿದರು.

ಈತನ ಹೀನಾಯ ಕೃತ್ಯ ಪವರ್​ ಟಿವಿಯಲ್ಲಿ ಪ್ರಸಾರ ಆಯ್ತು. ನನಗೆ ಬಹಳ ಖುಷಿಯಾಗಿದೆ. ಮಾಜಿ ಪ್ರಧಾನಿಗಳ ಮೊಮ್ಮಗ ಅಥವಾ ಸಂಸದ ಎನ್ನದೇ ಪತ್ರಿಕಾ ಧರ್ಮವನ್ನು ಪಾಲನೆ ಮಾಡಿ, ಪವರ್ ಟಿವಿಯಲ್ಲಿ ಈ ಬಗ್ಗೆ ನೇರವಾಗಿ ಸುದ್ದಿ ಪ್ರಸಾರ ಮಾಡಿದ್ದೀರಿ. ಅದಕ್ಕಾಗಿ ಮೊದಲನೆಯದಾಗಿ ಪವರ್​ ಟಿವಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪವರ್ ಟಿವಿ ಕಾರ್ಯವನ್ನು ಶಾಸಕ ಕೆ.ಎಸ್. ಆನಂದ್ ಶ್ಲಾಘಿಸಿದರು.

ಅಧಿಕಾರಿಗಳು, ಜನಪ್ರತಿನಿಧಿಗಳನ್ನೂ ಬಿಟ್ಟಿಲ್ಲ

ಕಳೆದ ನಾಲ್ಕೈದು ದಿನಗಳಿಂದ ಹಾದಿ ಬೀದಿಯಲ್ಲಿ ಸಿಡಿಗಳು, ಪೆನ್​ಸ್ರೈವ್​ಗಳು ಹೊರಗೆ ಬಂದಿವೆ. ಇದೆಲ್ಲವನ್ನೂ ನೋಡಿದ ಜನ ಇಂಥ ಒಬ್ಬ ಸಂಸದನನ್ನು ನಾವು ಪಡೆದೆವಾ? ಒಬ್ಬ ಮನುಷ್ಯ ಈ ಮಟ್ಟದ ಹೀನಾಯ ಕೃತ್ಯಕ್ಕೆ ಇಳಿಯುತ್ತಾನಾ? ಎಂದು ಈ ಭಾಗದ ಜನ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಕೂಡ ಈತ ಅಸಭ್ಯ ವರ್ತನೆ ತೋರಿದ್ದಾನೆ. ಆ ದೃಶ್ಯಗಳು ಕೂಡ ವಾಟ್ಸ್​ಆಪ್​ನಲ್ಲಿ ಬರುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.

ಐದು ಮಾಡಿದ್ದೆಲ್ಲಾ ಈಗ ಹೊರಗೆ ಬರುತ್ತಿದೆ

ದೊಡ್ಡ ಕುಟುಂಬಕ್ಕೆ ಸೇರಿರುವ ವ್ಯಕ್ತಿ ಈ ರೀತಿ ಮಾಡುತ್ತಾನೆ ಅಂದರೆ ಹೇಗೆ? ದೇಶದ ಕಾನೂನು ಮಾಡುವಂತಹ ಒಂದು ಅವಕಾಶ ಆತನಿಗೆ ಸಿಕ್ಕಿದೆ. ಅದನ್ನು ಒಳ್ಳೆಯ ರೀತಿ ಬಳಸಿಕೊಳ್ಳಬೇಕಿತ್ತು. ಕಡೂರು ವಿಧಾನಸಭಾ ಕ್ಷೇತ್ರ ಈತನ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ಇಡೀ ಕಡೂರಿಗೆ ಐದು ವರ್ಷದಲ್ಲಿ ಆತ ಕೇವಲ ಐದು ಬಾರಿ ಬಂದಿದ್ದಾನೆ. ಕೊರೊನಾ ಸಮಯದಲ್ಲೂ ಬಂದು ಅಧಿಕಾರಿಗಳ ಜೊತೆ ಸಭೆ ಮಾಡಲಿಲ್ಲ. ಆಕ್ಸಿಜನ್, ಬೆಡ್​ ಇಲ್ಲದೆ ಜನರು ನರಳಿದರು. ಆಗ ಸಹ ಆಸ್ಪತ್ರೆಗಳಿಗೆ ಭೇಟಿ ನೀಡಲಿಲ್ಲ. ಜನರಿಗೆ ಆತ್ನಸ್ಥೈರ್ಯ ತುಂಬಲಿಲ್ಲ. ಐದು ವರ್ಷದಲ್ಲಿ ಒಂದು ಹಳ್ಳಿ ಸಹ ನೋಡಿಲ್ಲ. ಆತ ಐದು ಮಾಡಿದ್ದೆಲ್ಲಾ ಈಗ ಹೊರಗೆ ಬರುತ್ತಿದೆ. ಅಸಹ್ಯ ಕೃತ್ಯದಲ್ಲೇ ಈತ ಭಾಗಿಯಾಗಿದ್ದಾನೆ ಎಂದು ಶಾಸಕ ಕೆ.ಎಸ್. ಆನಂದ್ ಕಿಡಿಕಾರಿದರು.

RELATED ARTICLES

Related Articles

TRENDING ARTICLES