Saturday, April 27, 2024

ಕುಮಾರಣ್ಣ, ವಿಜಯೇಂದ್ರ ಅದ್ಭುತ ಜೋಡಿ: ಮಾಜಿ ಸಚಿವ ಸಿ.ಎನ್​ ಅಶ್ವತ್ಥನಾರಾಯಣ

ಮಂಡ್ಯ : 18ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಉತ್ತಮ, ಸದೃಢ ಅಭ್ಯರ್ಥಿ ಮಂಡ್ಯದಿಂದ ಆಯ್ಕೆಯಾಗಬೇಕು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣಗೌಡ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಮಂಡ್ಯ ಮಾದರಿ ಕ್ಷೇತ್ರವಾಗಿತ್ತು. ರೈತಾಪಿ ವರ್ಗ ಹೆಚ್ಚಿರುವ ಕ್ಷೇತ್ರ ಮಂಡ್ಯ. ಪರಿಣಾಮಕಾರಿಯಾಗಿ ಕ್ಷೇತ್ರ ಪ್ರತಿನಿಧಿಸುವ ನಾಯಕ ಕುಮಾರಸ್ವಾಮಿ. ಅರ್ಹತೆ, ಯೋಗ್ಯತೆ ಬಹುಮುಖ್ಯ. ಜನರ ಕಷ್ಟ ಸುಖ ಅರ್ಥ ಮಾಡಿಕೊಂಡ ನಾಯಕ ಬೇಕಾ? ಯಾರದ್ದೋ ಹಿಂದೆ ತಲೆಕೆರೆದು ನಿಲ್ಲುವ ವ್ಯಕ್ತಿ ಬೇಕಾ? ಪ್ರಬಲವಾದ ನಾಯಕನಿಗೆ ಬೆಂಬಲ ಕೊಡಲು ನಾವು ಬಂದಿದ್ದೇವೆ ಎಂದರು.

ಇದನ್ನೂ ಓದಿ: ಲೋಕಸಮರ: ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ

ಕುಮಾರಣ್ಣ ಮಂಡ್ಯದಿಂದ ರಾಜ್ಯದ ಧನಿಯಾಗಿ ಕೆಲಸ ಮಾಡಲಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್‌ ದುಡ್ಡಿರುವ ವ್ಯಕ್ತಿಯನ್ನ ಕರೆತಂದಿದ್ದಾರೆ. ಹಣಬಲವೊ, ಜನಬಲವೋ ಈ ಚುನಾವಣೆಯಲ್ಲಿ ನಿರ್ಧಾರವಾಗಬೇಕು. ಮೋದಿ ನಾಯಕತ್ವ ಬೇಕು ಎಂದು ಕುಮಾರಸ್ವಾಮಿ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಬಿಜೆಪಿಯವರಾದ ನಾವು ನಿಯತ್ತಿನಿಂದ, ಕುಮಾರಣ್ಣನ ಗೆಲುವಿಗೆ ಶ್ರಮಿಸ್ತೇವೆ ಇದರಲ್ಲಿ ಯಾವುದೇ ಸಂಶಯಬೇಡ. ಕುಮಾರಣ್ಣ, ವಿಜಯೇಂದ್ರ ರಾಜ್ಯದಲ್ಲಿ ಅದ್ಭುತ ಜೋಡಿ. ಅವರ ಕೈ ಬಲಪಡಿಸೋಣ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES