ಆನೇಕಲ್ : ಅರಣ್ಯ ಪ್ರದೇಶದಲ್ಲಿ ಬೆಳ್ಳಂ ಬೆಳಗ್ಗೆ ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ಹೈಟೆಕ್ ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ದೇವರಾಜು (40), ಆನೇಕಲ್ ತಾಲೂಕಿನ ಆದೂರು ಮೂಲದ ರಾಮಕೃಷ್ಣ(40), ಆನೇಕಲ್ ತಾಲೂಕಿನ ಇಂಡ್ಲವಾಡಿ ಮೂಲದ ಕಿಶೋರ್(23) ಬಂಧಿತರು.
ಇದನ್ನೂ ಓದಿ: ಮೋದಿ ಬಂದು ಹೇಳಿದ್ರು ಚುನಾವಣೆಗೆ ನಿಲ್ಲುತ್ತೇನೆ : ಈಶ್ವರಪ್ಪ ಶಪಥ
ಆನೇಕಲ್ ವಯಲ ಅರಣ್ಯ ಪ್ರದೇಶದ ಪ್ರವಾಸಿ ತಾಣ ಮುತ್ಯಾಲಮಡು ಬಳಿ ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಆರು ಜನರ ತಂಡ ಜಿಂಕೆ ಬೇಟೆಯಾಡಿ ಪಕ್ಕದ ಖಾಸಗಿ ಜಮೀನಿನಲ್ಲಿ ಮಾಂಸ ಹಂಚಿಕೊಂಡಿದ್ದಾರೆ. ಮಾಂಸ ಹಂಚಿಕೆ ಬಳಿಕ ಮೂವರು ಬೈಕ್ ನಲ್ಲಿ ಹೊರಟು ಮುತ್ಯಾಲಮಡು ಪ್ರವಾಸಿ ತಾಣದ ಬಳಿ ಬರುತ್ತಿದ್ದಂತೆ ವಲಯ ಅರಣ್ಯಾಧಿಕಾರಿಗಳಾದ ರಮೇಶ್ ಬಾಬು ನೇತೃತ್ವದ ತಂಡ ಮಾಂಸದ ಸಮೇತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಬೇಟೆಯಾಡಿದ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋದಾಗ ಬೇಟೆಯಾಡಿದ ಸ್ಥಳದಲ್ಲಿದ್ದ ಮತ್ತೆ ಮೂವರು ಮಾಂಸ ಹಂಚಿಕೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಅರಣ್ಯಾಧಿಕಾರಿಗಳನ್ನು ಕಂಡ ಆರೋಪಿಗಳನ್ನು ಕಾರನ್ನು ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಕಾರು, ಮೂರು ಬೈಕ್, ಕೃತ್ಯಕ್ಕೆ ಬಳಸಿದ ಗನ್, ಮಚ್ಚು ಹಾಗೂ ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.