Saturday, April 27, 2024

ಮೋದಿಯಲ್ಲ.. ಬ್ರಹ್ಮ ಬಂದು ಹೇಳಿದ್ರೂ, ಚುನಾವಣೆಗೆ ನಿಲ್ಲುತ್ತೇನೆ : ಈಶ್ವರಪ್ಪ ಶಪಥ

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಸೇರಿ ಬ್ರಹ್ಮ ಬಂದು ಹೇಳಿದ್ರು ನಾನು ಚುನಾವಣೆಗೆ ನಿಲ್ಲುತ್ತೇನೆ. ನನ್ನನ್ನು ನಂಬಿದವರಿಗೆ ದ್ರೋಹ ಮಾಡಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹ ಯಡಿಯೂರಪ್ಪನವರ ಜೊತೆ ಪಕ್ಷ ಕಟ್ಟಿದ್ದವನು. ನನ್ನ ತಾಯಿ ಬಿಜೆಪಿ, ಗೆದ್ದ ನಂತರ ಬಿಜೆಪಿಗೆ ಹೋಗ್ತೇನೆ. ಈಗಲೂ ನಾನು ಬಿಜೆಪಿಯೇ ಎಂದು ತಿಳಿಸಿದರು.

ನಾನು ಬೆದರಿಕೆ ಹಾಕಿ ಚುನಾವಣೆಗೆ ಸ್ಪರ್ಧಿಸಿಲ್ಲ. ಅನೇಕ ಹಿಂದೂ ಹುಲಿಗಳಿಗೆ ಅನ್ಯಾಯ ಆಗಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದಂತೆ ಬಿ.ವೈ. ರಾಘವೇಂದ್ರ ಸೋಲುತ್ತಾನೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೇಳಗಿಳಿಯುತ್ತಾನೆ. ಮತ್ತೆ ಸದೃಡ ಸ್ಥಿತಿಯಿಂದ ಪಕ್ಷವನ್ನು ಕಟ್ಟುತ್ತೇವೆ ಎಂದು ಹೇಳಿದರು.

ಇಡೀ ರಾಜ್ಯದಿಂದ ಪೋನ್ ಬರುತ್ತಿವೆ

ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಲೋಕಸಭಾ ಕ್ಷೇತ್ರದ ಕಾರ್ಯಾಲಯವನ್ನು ಉದ್ಘಾಟನೆ ಮಾಡಿದ್ದೇನೆ. ಐದು ಜನ ಮುತ್ತೈದೆಯರು ದೀಪ‌ಬೆಳಗುವ ಮೂಲಕ ಕಚೇರಿ ಉದ್ಘಾಟನೆ ಆಗಿದೆ. ಎಲ್ಲಾ ಪಕ್ಷದ ಮುಖಂಡರು ಶುಭ ಕೋರಿದ್ದಾರೆ. ಆರಂಭದಿಂದ ಇಡೀ ರಾಜ್ಯದಿಂದ ಪೋನ್ ಬರುತ್ತಿವೆ. ಸ್ಪರ್ಧೆ ಮಾಡಬೇಕು ಹಿಂದೆ ಸರಿಯಬಾರದು ಅಂತ ಹೇಳಿದ್ದಾರೆ. ಯಡಿಯೂರಪ್ಪ ಈಗಲೂ ಹೇಳುತ್ತಿದ್ದಾರೆ, ನಿರ್ಧಾರ ವಾಪಸ್ ತಗೋತ್ತಾರೆ ಅಂತ. ಅದು ಅಸಾಧ್ಯ ಎಂದು ಕುಟುಕಿದರು.

ಸುಳ್ಳಿನ ಸರದಾರ ಯಡಿಯೂರಪ್ಪ

ಯಡಿಯೂರಪ್ಪ ಅಪಪ್ರಚಾರ ಮಾಡುತ್ತಿದ್ದಾರೆ. ಅಪ್ಪ ಮಕ್ಕಳ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಯಾರುಷಡ್ಯಂತ್ರಕ್ಕೂ ಒಳಗಾಗಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ. ನನ್ನ ಹತ್ತಿರ ಬನ್ನಿ ಯಾವ ಸ್ವಾಮೀಜಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ತೋರಿಸುತ್ತೇನೆ. ಕಾರ್ಯಕರ್ತರ ಮನೆಗೆ ಹೋಗಿ ಕಾರ್ಪೊರೇಟರ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸುಳ್ಳಿನ ಸರದಾರ ಯಡಿಯೂರಪ್ಪ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES