ಬೆಳಗಾವಿ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಥಣಿಗೆ ಬಂದರೇ ಹೆಣ್ಣು ಮಕ್ಕಳ ಕೈಲಿ ಮಂಗಳಾರತಿ ಮಾಡಿ ಕಳಿಸುತ್ತೇವೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಕಿಡಿಕಾರಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಅಥಣಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುವ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ವೈ ವಿರುದ್ದ ಸವಧಿ ಕಿಡಿಕಾರಿದರು. ಕಳೆದ ಬಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ತಾಲೂಕಿಗೆ ವೆಟರ್ನರಿ ಕಾಲೇಜು ಸ್ಥಾಪನೆಗೆ 125 ಕೋಟಿ ಹಣ ನೀಡಬೇಕು ಎಂದು ಮನವಿ ಮಾಡಿದ್ದೆವು. ಅದಕ್ಕೆ ಅವರು ಸವದಿ ಅವರೇ ನನಗೆ ವಿಷ ಕುಡಿಯಲು ದುಡ್ಡು ಇಲ್ಲ ನಿಮಗೆಲ್ಲಿ ದುಡ್ಡು ಕೊಡಲಿ ಎಂದಿದ್ದರು.
ಇದನ್ನೂ ಓದಿ: ಹಾಸನ JDS ಅಭ್ಯರ್ಥಿ ಪರ ಕೆಲಸ ಮಾಡಲು BJP ವಿರೋಧ ಹೇಳಿಕೆ ಸುಳ್ಳು: ರಾಧಾಮೋಹನ್ದಾಸ್
ಈ ಬಾರಿ ಅಥಣಿಗೆ ಯಡಿಯೂರಪ್ಪ ಬರಲಿ ಹೆಣ್ಣುಮಕ್ಕಳ ಕೈಲಿ ಮಂಗಳಾರತಿ ಮಾಡಿ ಕಳಿಸುವ ಕೆಲಸ ಮಾಡೋಣ ಎಂದು ಬಿಎಸ್ವೈ ವಿರುದ್ದ ಹರಿಹಾಯ್ದರು.