Monday, May 13, 2024

ಪ್ರಜ್ವಲ್​ ರೇವಣ್ಣ ಪ್ರತಿಕೃತಿ ದಹಿಸಿ ಮಹಿಳೆರಿಂದ ಪ್ರತಿಭಟನೆ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅಮಾಯಕ ಹೆಣ್ಣುಮಕ್ಕಳ ಜೊತೆ ಅಶ್ಲೀಲವಾಗಿ ನಡೆದುಕೊಂಡು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು ಇದಕ್ಕೆ ಸಂಬಂಧಿಸಿ ಪೆನ್​ಡ್ರೈವ್​ ವೀಡಿಯೋಗಳು ವೈರಲ್​ ಆಗುತ್ತಿದ್ದಂತೆ ರಾಜ್ಯಾದ್ಯಂತ ಪ್ರಜ್ವಲ್ ವಿರುದ್ದ ಜನ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್​ ಕಚೇರಿ ಆವರಣದಲ್ಲಿ ಕಾಂಗ್ರೆಸ್​ ಮಹಿಳಾ ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಜ್ವಲ್ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಪೊರಕೆಯಲ್ಲಿ ಹೊಡೆದು ಪ್ರತಿಕೃತಿಗೆ ಬೆಂಕಿ ಇಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ಲಕಾರ್ಡ್​ ಕೂಡ ಪ್ರದರ್ಶಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೇ ನೀಡಿದ ಮುಖಂಡರು, ದೇಶ ಕಂಡ ಅತ್ಯಂತ ವಿಕೃತ ಕಾಮುಕ ಎಂದರೇ ಅದು ಪ್ರಜ್ವಲ್ ರೇವಣ್ಣ ಎಂದು ಸಾಬೀತಾಗಿದೆ, ಅಮಾಯಕ ಮಹಿಳೆಯರನ್ನ, ಹಿರಿಯ ಮಹಿಳೆಯರ ಮೇಲೆ ಅತ್ಯಾರವೆಸಗಿ ಅವರ ವೀಡಿಯೋಗಳನ್ನು ಚಿತ್ರೀಕರಣ ಮಾಡುವ ಮೂಲಕ ಮಹಿಳೆಯರನ್ನ ಅಗೌರವಾಗಿ ನಡೆದುಕೊಂಡಿರುವ ದೇವೇಗೌಡ ಅವರ ಕುಟುಂಬ ಜೀವಂತವಾಗಿ ಇದ್ಯಾ ಎಂದು ಅನುಮಾನ ಬರುತ್ತಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಅಶ್ಲೀಲ ವೀಡಿಯೋ ಪ್ರಕರಣ SIT ತನಿಖೆಗೆ ಆದೇಶ : ಜರ್ಮನಿಗೆ ಹಾರಿದ ಪ್ರಜ್ವಲ್​ ರೇವಣ್ಣ

ದೇಶದ ಮಹಿಳೆಯರ ಬಗ್ಗೆ ಗೌರವ ಇರುವ ಕುಟುಂಬ ಎಂದು ಹೇಳುವ ದೇವೇಗೌಡ ಅವರೇ, ನಿಮ್ಮ ಪಕ್ಷದ ಗುರುತು ಮಹಿಳೆ, ಅಂಥ ಮಹಿಳೆಯರಿಗೆ ರಕ್ಷಣೆ ನೀಡಲು ಮುಂದೆ ಬರದೇ ಅತ್ಯಾಚಾರಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಬಿಜೆಪಿ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ನಿಮ್ಮಂತ ನೀಚಗೆಟ್ಟ, ಮಾನರ್ಯಾದೆ ಬಿಟ್ಟ ಕುಟುಂಬ ಯಾವುದು ಇಲ್ಲ ಎಂಬುದು ಸಾಬೀತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ದೇವೇಗೌಡ, ಹೆಚ್​ಡಿ ಕುಮಾರಸ್ವಾಮಿ, ಹೆಚ್​ಡಿ ರೇವಣ್ಣ ಅವರು ಜನರ ಮುಂದೆ ಬಂದು ಅತ್ಯಾಚಾರಿ ಪ್ರಜ್ವಲ್ ರೇವಣ್ಣ ಅವರನ್ನು ಗಲ್ಲಿಗೇರಿಸುವ ಹೇಳಿಯನ್ನು ನೀಡುವಂತೆ ಆಗ್ರಹಿಸಿದರು.

RELATED ARTICLES

Related Articles

TRENDING ARTICLES