ಬೆಂಗಳೂರು: ಕಂದಾಯ ಸಚಿವರಿಗೆ ಹಳ್ಳಿ ಕಡೆ ದೃಷ್ಟಿನೇ ಹರಿಸಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ, ಹಳ್ಳಿಗಳಲ್ಲಿ ಇಲ್ಲ ಅಂತ ಸಚಿವ ಕೃಷ್ಣಾ ಬೈರೇಗೌಡ ಹೇಳಿಕೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಇರುವ ನೀರಿನ ಸಮಸ್ಯೆ ಬಗ್ಗೆ ಗೊತ್ತೆ ಆಗಿಲ್ಲ ಅನಿಸ್ತಿದೆ. ಇದು ಅದಕ್ಷತೆಯೋ, ಅಸಮರ್ಥತೆಯೋ ಒಂದು ತಿಳಿಯುತ್ತಿಲ್ಲ ಎಂದು ಹೇಳಿದ್ದರು.
ತಮಿಳುನಾಡಿನಲ್ಲಿ ಮೇಕೆದಾಟು ವಿಚಾರವಾಗಿ ಮ್ಯಾನಿಫೆಸ್ಟ್ ಬಿಟ್ರು. ಅದನ್ನು ವಿರೋಧಿಸುವ ಕೆಲಸವೂ ಮಾಡಲಿಲ್ಲ.ನಾವು ನಿಮ್ಮ ಮೈತ್ರಿ ಕಳ್ಕೋತೀವಿ ಅಂತ ಹೇಳಲಿಲ್ಲ.ಹೋಳಿ ಆಟವಾಡಲು ನೀರು ಸಾಲದ ಕಾಲ ಬರುತ್ತೆ ಅಂತ ಅಂದುಕೊಂಡಿರಲಿಲ್ಲ.ದಲಿತ ಸಿಎಂ ಅನ್ನೋ ಅಸ್ತ್ರ ಬಿಟ್ಟು, ಹೇಳಿಕೆ ನೀಡುತ್ತಿದ್ದಾರೆ.
ಖರ್ಗೆ, ಮಹದೇವಪ್ಪ, ಪರಮೇಶ್ವರ್ ಇವರನ್ನ ಆಸ್ತ್ರ ಮಾಡಿಕೊಂಡು ಹೇಳಿಕೆ ನೀಡ್ತಿದ್ದಾರೆ.ಜಗತ್ತಿನ ಜಿಡಿಪಿ ಕುಸಿದಾಗ, ಭಾರತದ ಜಿಡಿಪಿ ಗ್ರೋತ್ ಆಗಿದೆ. ಬಡವರಿಗೆ ಮಾಡಿರೋ ಕೆಲಸವನ್ನ ಮುಂದಿಟ್ಟುಕೊಂಡು ಮತ ಕೇಳ್ತೀವಿ ಎಂದರು.