Thursday, May 2, 2024

ಅಕ್ರಮವಾಗಿ ಶ್ರೀಗಂಧ ತುಂಡುಗಳ ಸಾಗಾಟ: ಕಳ್ಳರ ಬಂಧನ

ಹೊಸಪೇಟೆ: ಅಕ್ರಮವಾಗಿ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರು ಖತರ್ನಾಕ್​ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸಪೇಟೆಯ ಸಂಡೂರು ರಸ್ತೆಯಿಂದ ಸಿರಸನಕಲ್ಲು ಮಾರ್ಗವಾಗಿ ಗೂಡ್ಸ್​ ವಾಹನ ಹಾಗು ಟಾಟಾ ಪಿಕಪ್​ ವಾಹನದಲ್ಲಿ ನಾಲ್ವರು ಕಳ್ಳರು ಶ್ರೀಗಂಧ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಂಧಿತರಿಂದ 30 ಲಕ್ಷ 45 ಸಾವಿರ ಮೌಲ್ಯದ ಶ್ರೀಗಂಧ ಜಪ್ತಿ ಮಾಡಲಾಗಿದೆ.

ಬೆಲೆಬಾಳುವ ಶ್ರೀಗಂಧ ತುಂಡುಗಳನ್ನು ಪತ್ತೆಹಚ್ಚಿ ಕಳ್ಳರ ಸಮೇತ ವಶಕ್ಕೆ ಪಡೆದ ಪೊಲೀಸರ ತಂಡವನ್ನು ವಿಜಯನಗರ ಎಸ್ಪಿ ಹರಿಬಾಬು ಪ್ರಶಂಸಿಸಿ ವಿಶೇಷ ಬಹುಮಾನ ಘೋಷಿಸಿದ್ದಾರೆ. ಸದ್ಯ ಪರಾರಿಯಾಗಿರುವ ಅಂತರರಾಜ್ಯ ಕಳ್ಳರ ಪತ್ತೆಗಾಗಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

RELATED ARTICLES

Related Articles

TRENDING ARTICLES