ಶಿವಮೊಗ್ಗ: ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಮಲ ಚಿ ಮತ ನೀಡಿ ಎಂದು ಆಯನೂರು ಮಂಜುನಾಥ್ ಎಡವಟ್ಟು ಮಾಡಿಕೊಂಡಿದ್ದಾರೆ.
ಹೊಳೆಹೊನ್ನೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಭಾಷಣ ಮಾಡುವಾಗ ಅವರು ಈ ಎಡವಟ್ಟು ಹೇಳಿಕೆಯನ್ನು ನೀಡಿದ್ದಾರೆ.
ಕಮಲಕ್ಕೆ ಮತ ನೀಡಿ ಎಂದ ಆಯನೂರು
ಕಮಲಕ್ಕೆ ನಿಮ್ಮ ಮತ ನೀಡಿ ಎಂದಾಗ ತಕ್ಷಣವೇ ಗ್ರಾಮಸ್ಥರು ಕೂಗಿದ್ದರು. ಈ ವೇಳೆ ತಮ್ಮ ಭಾಷಣ ಸರಿಪಡಿಸಿಕೊಂಡು ನೀವು ಸಂಜೆಯಾದ ತಕ್ಷಣ ತಪ್ಪು ಕೇಳಿಸ್ಕೊಂಡ್ರಿ ನೀವು ಕಮಲಕ್ಕೆ ಮತ ನೀಡಬೇಡಿ, ಕಾಂಗ್ರೆಸ್ ಗೆ ಮತ ನೀಡಿ ಅಂತಾ ನಾನು ಹೇಳಿದ್ದು ಎಂದು ಎಂದ ಎಚ್ಚೆತ್ತುಕೊಂಡರು.