Wednesday, May 8, 2024

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಎಡವಟ್ಟು: ಕಮಲಕ್ಕೆ ಮತ ನೀಡಿ ಎಂದ ಆಯನೂರು ಮಂಜುನಾಥ್

ಶಿವಮೊಗ್ಗ: ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಮಲ ಚಿ ಮತ ನೀಡಿ ಎಂದು ಆಯನೂರು ಮಂಜುನಾಥ್ ಎಡವಟ್ಟು ಮಾಡಿಕೊಂಡಿದ್ದಾರೆ. 

ಹೊಳೆಹೊನ್ನೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್ ಪರ  ಭಾಷಣ ಮಾಡುವಾಗ ಅವರು ಈ ಎಡವಟ್ಟು ಹೇಳಿಕೆಯನ್ನು ನೀಡಿದ್ದಾರೆ.

 ಕಮಲಕ್ಕೆ ಮತ ನೀಡಿ ಎಂದ ಆಯನೂರು

ಕಮಲಕ್ಕೆ ನಿಮ್ಮ ಮತ ನೀಡಿ ಎಂದಾಗ ತಕ್ಷಣವೇ ಗ್ರಾಮಸ್ಥರು ಕೂಗಿದ್ದರು. ಈ ವೇಳೆ ತಮ್ಮ ಭಾಷಣ ಸರಿಪಡಿಸಿಕೊಂಡು ನೀವು ಸಂಜೆಯಾದ ತಕ್ಷಣ ತಪ್ಪು ಕೇಳಿಸ್ಕೊಂಡ್ರಿ ನೀವು ಕಮಲಕ್ಕೆ ಮತ ನೀಡಬೇಡಿ, ಕಾಂಗ್ರೆಸ್ ಗೆ ಮತ ನೀಡಿ ಅಂತಾ ನಾನು ಹೇಳಿದ್ದು ಎಂದು ಎಂದ ಎಚ್ಚೆತ್ತುಕೊಂಡರು.

RELATED ARTICLES

Related Articles

TRENDING ARTICLES