Wednesday, May 8, 2024

ಯಾರ ಬಗ್ಗೆಯೂ ನಾನು ಕೀಳಾಗಿ‌ ಮಾತಾಡಿಲ್ಲ: ಜಯಪ್ರಕಾಶ್ ಹೆಗ್ಡೆ

ಉಡುಪಿ: ಯಾರ ಬಗ್ಗೆಯೂ ತಾನು ಕೀಳಾಗಿ‌ ಮಾತಾಡಿಲ್ಲ, 1994 ರಲ್ಲೇ ಶಾಸಕನಾಗಿ ಆಯ್ಕೆಯಾಗಿ ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದೇನೆ, ನನ್ನ ಒಂದೂ‌ ಮಾತನ್ನು ಕಡತದಿಂದ ತೆಗೆದ ಉದಾಹರಣೆ ಇಲ್ಲ ಅಂತ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾದ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಅವರು,ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಹಿಂದಿ ಇಂಗ್ಲಿಷ್ ಬರಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾದ ಬಗ್ಗೆ ಅವರು ಈ ಪ್ರತಿಕ್ರಿಯೆ ನೀಡಿದರು. ನಾನು ಆ ಮಾತುಗಳನ್ನು ಆಡಿದ್ದೇನೆ ಎಂದು ಹೇಳಿಕೊಂಡು ಅವರು ತಿರುಗುತ್ತಿದ್ದಾರೆ.

ನಾನು ಯಾರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ.ಅವರ ಪಕ್ಷದವರೇ ಅವರ ಬಗ್ಗೆ ಕೀಳಾಗಿ  ಮಾತಾಡಿರಬಹುದು,ಅದು ಗೊತ್ತಿಲ್ಲ.ಆದರೆ ನಾನು ರಾಜಕೀಯ ಜೀವನದಲ್ಲಿ ಎಂದೂ ಯಾವ ಪಕ್ಷದವರ ಬಗ್ಗೆಯೂ ಕೀಳಾಗಿ ಮಾತಾಡಿಲ್ಲ,ಟೀಕೆ ಮಾಡಿಲ್ಲ.ಮುಂದೆಯೂ ಮಾಡುವುದಿಲ್ಲ. ಆರೋಗ್ಯಕರ ಚುನಾವಣೆ ನಡೆಯಬೇಕು ಎಂದು ವಾದಿಸುವವರಲ್ಲಿ ನಾನೂ ಒಬ್ಬ ಎಂದು ಜೆ.ಪಿ.ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES