ಬೆಂಗಳೂರು: ಅಳಿಯನಿಗೆ ಟಿಕೆಟ್ ಸಿಗುತ್ತೆ ಎಂಬ ಆಶಾ ಭಾವನೆಯಲ್ಲಿ ಇದ್ದೇನೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ಧಾರೆ.
ಡಿ.ಕೆ ಶಿವಕುಮಾರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,35-45 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದ ಎಲ್ಲರ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದಾರೆ.ಅಕಸ್ಮಾತ್ ಆಗಿ ಕಳೆದ ಬಾರಿ ನನಗೆ ಸೋಲಾಗಿದೆ. ನಾನು ಒಂದು ತಾಲ್ಲೂಕಿಗೆ ಜಿಲ್ಲೆಗೆ ಸೀಮಿತ ವ್ಯಕ್ತಿ ಅಲ್ಲ ನನ್ನ ಅಳಿಯನಿಗೂ ಟಿಕೆಟ್ ಕೊಡಿಸಲು ನಾನು ಕೇಳುತ್ತಿದ್ದೇನೆ ನೋಡೋಣ ಗುಡ್ ನ್ಯೂಸ್ ಸಿಗುತ್ತೆ ಎಂಬ ಆಶಾ ಭಾವನೆಯಲ್ಲಿ ಇದ್ದೇನೆ ಎಂದರು.
ರಾಜ್ಯದಲ್ಲಿ ನನ್ನದೆ ಆದ ಶಕ್ತಿ ಇದೆ
ದೊಡ್ಡ ಪಕ್ಷ ಭಿನ್ನಾಭಿಪ್ರಾಯಗಳು ಇರುತ್ತವೆ ಅದನ್ನ ಸರಿಪಡಿಸಿಕೊಳ್ಳುತ್ತೇವೆ.ನನ್ನನ್ನ ಸೋಲಿಸಿದರೂ ಯಾರ ವಿರುದ್ದವೂ ನಾನು ಮಾತನಾಡಲಿಲ್ಲ.ನನ್ನ ಸೋಲಿಸಿದವರಿಗೆ ಟಿಕೆಟ್ ಕೊಡಬೇಡಿ ಅಂತಾ ನಾನು ಯಾವತ್ತೂ ಹೇಳಿಲ್ಲ.ರಮೇಶ್ ಕುಮಾರ್ ವಿರುದ್ದವೂ ಮಾತನಾಡಿಲ್ಲ ರಾಜ್ಯದಲ್ಲಿ ನನ್ನದೆ ಆದ ಶಕ್ತಿ ಇದೆ ಎಂದರು.
ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಲೋಕಸಭಾ ಟಿಕೆಟ್ ಗಿಟ್ಟಿಸಲು ಯತ್ನಿಸುತ್ತಿದ್ದಾರೆ.