Wednesday, May 1, 2024

ಬ್ಯಾನರ್​ನಲ್ಲಿ ಈಶ್ವರಪ್ಪ ಫೋಟೊ ಹಾಕದಿದ್ದಕ್ಕೆ ವೇದಿಕೆ ಮೇಲೆ ಗಲಾಟೆ

ಬಳ್ಳಾರಿ : ಬಿಜೆಪಿ ಬೂತ್​ ವಿಜಯ್​ ಅಭಿಯಾನ ಸಭೆಯ ಬ್ಯಾನರ್​ನಲ್ಲಿ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಫೋಟೊ ಹಾಕದ ಹಿನ್ನೆಲೆ ಈಶ್ವರಪ್ಪ ಸಂಬಂಧಿ ರಾಮಲಿಂಗಪ್ಪ ಗಲಾಟೆ ಮಾಡಿರುವ  ಘಟನೆ ನಡೆದಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಬಳ್ಳಾರಿ ಬಿಜೆಪಿ ಬೂತ್​ ವಿಜಯ್​ ಅಭಿಯಾನ ಸಭೆಯನ್ನು ಬಳ್ಳಾರಿ ಗ್ರಾಮಾಂತರ ಮತ್ತು ಕೌಲ್​ ಬಜಾರ್​ ಮಂಡಲದಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ಸಭೆಯ ಬ್ಯಾನರ್​ನಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​ ಈಶ್ವರಪ್ಪ ಅವರ ಹೆಸರಾಗಲಿ ಅಥವಾ ಫೋಟೊವಾಗಲಿ ಹಾಕದ ಹಿನ್ನೆಲೆ ಈಶ್ವರಪ್ಪ ಅವರ ಸಂಬಂಧಿ ವೇದಿಕೆ ಮೇಲೆ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ವಿಜಯೇಂದ್ರ ರಾಜೀನಾಮೆ: ಭವಿಷ್ಯ ನುಡಿದ ಈಶ್ವರಪ್ಪ

ಕುರುಬ ಸಮುದಾಯದ ಪ್ರಬಲ ಮುಖಂಡರ ಫೋಟೊವನ್ನು ಹಾಕದೇ ಕುರುಬ ಸಮುದಾಯವನ್ನು ಯಾಕೆ ಕಡೆಗಣಿಸುತ್ತೀರ ಎಂದು ವೇದಿಕೆಯ ಮೇಲಿದ್ದ ಬಿಜೆಪಿ ಜಿಲ್ಲಾಧ್ಯಕ್ಷ್ಯರನ್ನು ತರಾಟೆಗೆ ತೆಗೆದುಕೊಂಡು ವೇದಿಕೆಯಿಂದ ಹೊರನಡೆಯುತ್ತಿದ್ದರು, ಬಳಿಕ ಮುಖಂಡರು ಮತ್ತೆ ರಾಮಲಿಂಗಪ್ಪ ಅವರನ್ನು ಸಮಾಧಾನಪಡಿಸಿ ಕರೆತರಲಾಯಿತು. ಇದರಿಂದ ವೇದಿಕೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಈ ಸಭೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ವೈ.ಎಂ ಸತೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES