Sunday, April 28, 2024

ನಾನು ದುಡ್ಡು ಮಾಡಲ್ಲ, ನಿಮ್ಮ ಸೇವೆ ಮಾಡ್ತೀನಿ : ಸ್ಟಾರ್ ಚಂದ್ರು

ಮಂಡ್ಯ : ನಾನು ದುಡ್ಡು ಮಾಡಲ್ಲ, ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ಒಂದು ಅವಕಾಶ ಕೊಡಿ, ಸೇವೆ ಮಾಡಲು ಆಶೀರ್ವಾದ ಮಾಡಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇ ಗೌಡ) ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ದುಡ್ಡು ಕೊಟ್ಟು ಆಶೀರ್ವಾದ ಮಾಡ್ತಿದ್ದಾರೆ. ಜನರು ಗೆಲ್ಲಿಸಲಿ, ಡೆಲ್ಲಿಗೆ ಹೋಗಿ ನಿಮ್ಮ ಕೆಲಸಗಳನ್ನು ಮಾಡ್ತೇನೆ ಎಂದರು.

ದುಡ್ಡಿಂದ ಯಾರು ಗೆಲ್ಲಲು ಸಾಧ್ಯವಿಲ್ಲ, ಜನರ ಪ್ರೀತಿ ಪಡೆದವರು ಗೆಲ್ಲಲ್ಲು ಸಾಧ್ಯ. ಕುಮಾರಣ್ಣ ದೊಡ್ಡವರು, ಹಿರಿಯರು, ದೇವರು ಯಾರಿಗೆ ಆಶೀರ್ವಾದ ಮಾಡ್ತಾನೆ ಮಾಡಲಿ. ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ, ಜನರ ಪ್ರತಿಕ್ರಿಯೆ ಸಿಕ್ಕಿದೆ. ಮಂಡ್ಯದಲ್ಲಿ ಮನೆ ಮಾಡಿ ಜನರ ಸೇವೆ ಮಾಡ್ತೇನೆ ಎಂದು ಹೇಳಿದರು.

ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ತೇನೆ

ಜನರ ಸೇವೆ ಮಾಡಲು ಅವಕಾಶ ಕೊಡಿ, ನಾನು ಕೆಲಸ ಮಾಡ್ತೇನೆ. ಶಾಸಕರ ಋಣ ತೀರಿಸಲು ಸಾಧ್ಯವಾಗಲ್ಲ, ಎಲ್ಲಾ ಶಾಸಕರು ನನಗೆ ಸಾಥ್ ಕೊಡ್ತಿದ್ದಾರೆ. ಗಣಿಗ ರವಿಕುಮಾರ್ ಅವರು ಕೂಡ ಸಾಥ್ ಕೊಟ್ಟಿದ್ದಾರೆ. ನಮ್ಮ ನಾಯಕರ ಜೊತೆ ಸೇರಿ ಕೆಲಸ ಮಾಡ್ತೇನೆ. ಈಗಾಗಲೇ ಜನರು ಸ್ಟಾರ್ ಚಂದ್ರು ಎಂಪಿ ಅಂತ ಹಾಕೊಂಡಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ತೇನೆ ಎನ್ನುವ ವಿಶ್ವಾಸ ಇದೆ ಎಂದು ಸ್ಟಾರ್ ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES