Wednesday, May 1, 2024

ಸಿದ್ದರಾಮಯ್ಯ ಕೂಡ ನಿಜವಾದ ದಲಿತ ವಿರೋಧಿ :ಡಾ. ಚಿನ್ನಪ್ಪ

ಬೆಂಗಳೂರು : ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವ ಮುಟ್ಟಾಳ ಅನಂತ್ ಕುಮಾರ್ ಹೇಳುತ್ತಾನೆ ಅಂತವನನ್ನು ಬಂಧನ ಮಾಡೋಕೆ ಸಿಎಂ ಸಿದ್ದರಾಮಯ್ಯಗೆ ದಮ್ಮು ತಾಕತ್ತು ಇಲ್ಲ ಎಂದು ಬಿಎಸ್​​ಪಿ ಪಕ್ಷದ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಅಭ್ಯರ್ಥಿ ಡಾ.ಚಿನ್ನಪ್ಪ ಕಿಡಿಕಾರಿದ್ದಾರೆ.

ಆನೇಕಲ್​​ನಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಹೇಳಿಕೆ ನೀಡಿದಂತವರನ್ನು ಅರೆಸ್ಟ್ ಮಾಡೋಕೆ ಸಿಎಂಗೆ ದಮ್ಮು ತಾಕತ್ತು ಇಲ್ಲ. ಅವರನ್ನು ಅರೆಸ್ಟ್ ಮಾಡಬೇಕಿತ್ತು. ಅಂತಹ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ. ಸಿದ್ದರಾಮಯ್ಯ ಕೂಡ ನಿಜವಾದ ದಲಿತ ವಿರೋಧಿ. ಕಾಂಗ್ರೆಸ್ ಬಿಜೆಪಿ ಎರಡು ಪಕ್ಷಗಳು ಜನರಿಗೆ ಯಾವುದೇ ಉಪಯೋಗ ಮಾಡಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಈಶ್ವರಪ್ಪ ಮನವೊಲಿಕೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ

ಅಲ್ಲದೇ ಹಾಲಿ ಸಂಸದ ಡಿಕೆ ಸುರೇಶ್ ಸಂಸದರ ಅನುದಾನದಲ್ಲಿ ಇದುವರೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES