ದಾವಣಗೆರೆ : ತಮ್ಮ ಪತಿ ಬದಲು ತಮಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಗಾಯತ್ರಿ ಜಿ.ಎಂ. ಸಿದ್ದೇಶ್ವರ್ ಸಂತೋಷ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ತ್ರೀ ಶಕ್ತಿಯ ಅವಕಾಶ ನನಗೆ ಸಿಕ್ಕಿದೆ. ಮಹಿಳೆಯರಿಗೆ ಟಿಕೆಟ್ ಕೊಡಬೇಕು ಅಂತ ಅವಕಾಶ ಮಾಡಿದ್ದಾರೆ ಎಂದು ಹೇಳಿದರು.
ಏಳು ವರ್ಷ ನಮ್ಮ ಮಾವ, ಕಳೆದ 20 ವರ್ಷ ನನ್ನ ಪತಿ ಸಿದ್ದೇಶ್ವರ್ ಇಲ್ಲಿ ಗೆದ್ದಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಕಾರ್ಯಕರ್ತರಿಗೆ ನಾವು ಗೊತ್ತು. ಪತಿ ಸಿದ್ದೇಶ್ವರ್ ಎಷ್ಟು ಸ್ಪಂದಿಸಿದ್ದಾರೆ ಎಂಬುದು ಇದಕ್ಕೆ ಉದಾಹರಣೆ. ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.
ನನಗೆ ಟಿಕೆಟ್ ನಿರೀಕ್ಷೆ ಇರಲಿಲ್ಲ
ನನಗೆ ಟಿಕೆಟ್ ನಿರೀಕ್ಷೆ ಇರಲಿಲ್ಲ, ಟಿವಿ ನೋಡಿ ಖುಷಿ ಪಟ್ಟೆ. ನನ್ನ ಹೆಸರು ಘೋಷಿಸಿದ್ದಕ್ಕೆ ವಿರೋಧ ಏನೂ ಇಲ್ಲ, ಎಲ್ಲರೂ ಸರಿ ಆಗ್ತಾರೆ. ಸ್ವಲ್ಪ ಹೊತ್ತು ಬೇಸರ ಇರುತ್ತದೆ, ಎಲ್ಲವೂ ಸರಿ ಹೊಗುತ್ತದೆ. ಎಲ್ಲರನ್ನೂ ಕರೆಯಿಸಿ ಮಾತನಾಡುತ್ತೇವೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬೇಕು ಅಂತ ಎಲ್ಲರೂ ಪಣ ತೊಟ್ಟಿದ್ದಾರೆ ಎಂದು ಗಾಯತ್ರಿ ಹೇಳಿದರು.