ಬೆಂಗಳೂರು: ಬೆಳಗಾವಿ ಕ್ಷೇತ್ರದ ಬಿಜೆಪಿ ಟಿಕೆಟ್ ಬಹುತೇಕ ಜಗದೀಶ್ ಶೆಟ್ಟರ್ಗೆ ಫಿಕ್ಸ್ ಆಗಿದೆ.
ಹೌದು,ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಕ್ಕಿಲ್ಲ ಎಂದ ಅಸಮಾಧಾನಗೊಂಡಿದ ಜಗದೀಶ್ ಶೆಟ್ಟರ್ಗೆ ಬಿಜೆಪಿ ಹೈಕಮಾಂಡ್ ನೀವು ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಆಫರ್ ನೀಡಿದೆ.
ಟಿಕೆಟ್ ವಿಚಾರವಾಗಿ ಇಂದು ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆದಿದ್ದು,ಶೆಟ್ಟರ್ ಹಾವೇರಿ ಕಣಕ್ಕಿಳಿಯಲು ಬಯಸಿದ್ದರು ಆದ್ರೆ ಬೊಮ್ಮಾಯಿ ಟಿಕೆಟ್ ನೀಡಿದ್ಧ ಕಾರಣ ಬೆಳಗಾವಿ ಟಿಕೆಟ್ ಹೋಲ್ಡ್ ನಲ್ಲಿಡಲಾಗಿತ್ತು.ಆದರೆ ಇಂದಿನ ಸಭೆಯಲ್ಲಿ ಶೆಟ್ಟರ್ ಕೊನೆಗೂ ಬೆಳಗಾವಿ ಕ್ಷೇತ್ರವನ್ನು ಒಪ್ಪಿಕೊಂಡಿದ್ದಾರೆ. ಬೆಳಗಾವಿ ಬಿಜೆಪಿ ಟಿಕೆಟ್ ಘೋಷಣೆಯಾಗುವುದು ಒಂದೇ ಬಾಕಿ ಇದೆ.
ಸಭೆಯಲ್ಲಿ ಮಾಜಿ ಸಚಿವ ಅರಗ ಜ್ಞಾನೇಂದ್ರ,ಬಿ.ವೈ ವಿಜಯೇಂದ್ರ ಭಾಗಿ ಶೆಟ್ಟರ್ ಒಪ್ಪಿಗೆ ಸೂಚಿಸುವಂತೆ ಮನವೊಲಿಸಿದ್ದಾರೆ.