Saturday, April 27, 2024

ದೇವೇಗೌಡ್ರು ಮೇಲೆ ಹೆಣ್ಣು ಮಗಳನ್ನ ನಿಲ್ಲಿಸಿ ಗೆದ್ದಿದ್ದೇವೆ : ಡಿ.ಕೆ. ಶಿವಕುಮಾರ್

ಕಲಬುರಗಿ ‌: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ಮೇಲೆ‌ ಹೆಣ್ಣು ಮಗಳನ್ನ ನಿಲ್ಲಿಸಿ ಗೆದ್ದಿದ್ದೇವೆ. ಕುಮಾರಸ್ವಾಮಿ, ದೇವೇಗೌಡರ ಮೇಲೆ ಗೆದ್ದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಕಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಾಲಿ 10 ಸಂಸದರನ್ನು ಬದಲಾವಣೆ ಮಾಡುತ್ತಿದ್ದಾರೆ ಎಂದು ಸ್ಫೋಟ ಹೇಳಿಕೆ ನೀಡಿದರು.

ಡಾ. ಮಂಜುನಾಥ್, ಹೆಚ್​.ಡಿ. ದೇವೆಗೌಡರು, ಹೆಚ್​.ಡಿ. ಕುಮಾರಸ್ವಾಮಿ ಬಗ್ಗೆ ಗೌರವ ಇದೆ. ಮಂಜುನಾಥ್ ಚುನಾವಣೆಗೆ ನಿಲ್ತಿದ್ದಾರೆ, ನಿಲ್ಲಲಿ ಪರವಾಗಿಲ್ಲ. ಡಿ.ಕೆ. ಸುರೇಶ್ ಸಂಸದ ಅಷ್ಟೇ ಅಲ್ಲ ಪಂಚಾಯತಿ ಮೆಂಬರ್ ಮಾಡುವ ಕೆಲಸ ಮಾಡ್ತಿದ್ದಾರೆ. ಕುಮಾರಸ್ವಾಮಿ ಹೇಳ್ತಿದ್ದಾರೆ ಅವರ ಸಿಸ್ಟರ್ ಅಳ್ತಿದ್ದಾರೆ ಅಂತ ಎಂದು ಚಾಟಿ ಬೀಸಿದರು.

BJP ಮೂವರು ಸಂಸದರು ಪಕ್ಷಕ್ಕೆ ಬರ್ತಾರೆ

ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಡಿಕೆಶಿ ಸಂಪರ್ಕ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಬಹಳ ಜನ ಬರುವವರು ಇದ್ದಾರೆ. ಹಾಲಿ ಸಂಸದರು ಮೂರು ಜನ ಪಕ್ಷಕ್ಕೆ ಬರೋದ್ರ ಬಗ್ಗೆ ಕೂಡ ಮಾತನಾಡಿದ್ದಾರೆ. ಯಾರ್ಯಾರು ಅನ್ನೋದ್ರ ಬಗ್ಗೆ ನಾನು ಇವಾಗ ಬಹಿರಂಗ ಮಾಡಲ್ಲ. ನಮ್ಮ ಪಕ್ಷವನ್ನ ಒಪ್ಪಿ ಬರೋದಾದ್ರೆ ಬನ್ನಿ ಅಂತ ಹೇಳಿದ್ದೇನೆ ಎಂದು ಹೇಳಿದರು.

ಲೋಕಸಭೆಯಲ್ಲಿ ನಾವು 20 ಸೀಟು ಗೆಲ್ಲುತ್ತೇವೆ

ಸಿಇಸಿ ಸಭೆ ಕರೆಯಬೇಕು, ಸಿಇಸಿ ಸಭೆ ಮುಗಿದ ಒಂದು ಗಂಟೆಯಲ್ಲೇ ಟಿಕೆಟ್ ಅನೌನ್ಸ್ ಆಗುತ್ತೆ. ನಾವು ಚುನಾವಣೆ ಸಲುವಾಗಿ ಗ್ಯಾರಂಟಿ ಕೊಡ್ತಿಲ್ಲ. ನಾವು ಜನರ ಬದುಕಿಗಾಗಿ ಗ್ಯಾರಂಟಿ ಕೊಟ್ಟಿದ್ದೇವೆ. ನಮಗೆ ವೋಟ್ ಮುಖ್ಯ ಅಲ್ಲ, ಕೊರೋನಾ ಸಂಧರ್ಭದಲ್ಲಿ ಮೂರರಷ್ಟು ದುಪ್ಪಟ್ಟು ಹಣ ಪಡೆಯುತ್ತಿದ್ದರು. ಆಗ ಕ್ಷಣಾರ್ಧದಲ್ಲೇ ಉಚಿತ ಬಸ್ ನೀಡುವ ಯೋಜನೆ ನೀಡಲಾಗಿದೆ. ಲೋಕಸಭೆಯಲ್ಲಿ ನಾವು 20 ಸೀಟು ಗೆಲ್ಲುತ್ತೇವೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ಪಡಿಸಿದರು.

RELATED ARTICLES

Related Articles

TRENDING ARTICLES