Wednesday, May 1, 2024

ಮಗಳ ಹಿಂದೆ ಬಿದ್ದು ಪೀಡಿಸಬೇಡ ಎಂದಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಯುವಕ

ಬಾಗಲಕೋಟೆ : ಮಗಳ ಹಿಂದೆ ಬಿದ್ದು ಪೀಡಿಸುವುದನ್ನು ಬಿಡು ಎಂದು ಹೇಳಿದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಯುವಕನೊಬ್ಬ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದಿದೆ.

ಸಂಗನಗೌಡ ಪಾಟಿಲ್(52)ಮೃತ ದುರ್ದೈವಿ. ಪ್ರವೀಣ ಕಾಂಬಳೆ ಕೊಲೆ ಕೃತ್ಯ ಎಸಗಿದ ಯುವಕ. ಅಂತರ್ಜಾತಿಯ ಯುವತಿಯನ್ನು ಆರೋಪಿ ಪ್ರವೀಣ್ ಪ್ರೀತಿಸಿದ್ದ. ಈ ವಿಚಾರ ಯುವತಿಯ ಪಾಲಕರಿಗೆ ತಿಳಿದು ಮಗಳಿಗೆ ಬುದ್ದಿ ಹೇಳಿದ್ದರು. ಅಲ್ಲದೆ, ಪ್ರವೀಣ್‌ ಗೂ ಹಿಗ್ಗಾಮುಗ್ಗಾ ಥಳಿಸಿ, ಮಗಳಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಪ್ರವೀಣ್, ಅದೇ ಸೇಡಿನಲ್ಲಿ ಮಚ್ಚಿನಿಂದ ಪ್ರೇಯಸಿಯ ತಂದೆ ಸಂಗನಗೌಡ ಪಾಟಿಲ್ ಕುತ್ತಿಗೆಯನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.

ಇದನ್ನೂ ಓದಿ: ಬಾಲ್ಯವಿವಾಹಕ್ಕೆ ನಿರಾಕರಣೆ; ಪತ್ನಿ ಕಾಲು ಮುರಿದ ಪತಿ

ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES