Sunday, May 5, 2024

ಗೀತಕ್ಕ ಟ್ರೋಲ್.. ‘ಸೋಶಿಯಲ್ ಮೀಡಿಯಾ ಒಂದು ಬದನೆಕಾಯಿ’ ಎಂದ ತಮ್ಮ ಮಧು ಬಂಗಾರಪ್ಪ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡ ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವುದಕ್ಕೆ ಸಹೋದರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಶಿಯಲ್ ಮೀಡಿಯಾ ಒಂದು ಬದನೆಕಾಯಿ’ ಎಂದು ಹೇಳಿದ್ದಾರೆ.

ಸಂಸದ ಬಿ.ವೈ. ರಾಘವೇಂದ್ರ ಮೊದಲ ಬಾರಿಗೆ ಸಂಸದರಾದಾಗ‌ ಏನು ಕಡಿದು ಕಟ್ಟೆ ಹಾಕಿದ್ರು? ಆ್ಯಂಬುಲೆನ್ಸ್ ಹಾಗೂ ಪೊಲೀಸ್ ವಾಹನದಲ್ಲಿ ಹಣ ತರಿಸಿ ಚುನಾವಣೆ ಮಾಡಿದ್ರು. ಹಣದಿಂದ ಆಗಿನ‌ ಸಿಎಂ ಪುತ್ರ ಗೆದ್ದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿಗ್ನೇಚರ್ ಮಾಡಿ ಯಾರಿಗೆ ಜೈಲಿಗೆ ಕಳಿಸಿದ್ರು

ನನ್ನ ಚೆಕ್ ಬೌನ್ಸ್ ಬಗ್ಗೆ ಬಹಳ ಪ್ರಚಾರವಾಯ್ತು. ಆಗ ನಾನು ಚೋಟಾ ಸಿಗ್ನೇಚರ್ ಬಗ್ಗೆ ಮಾತನಾಡಿದ್ದೆ. ಚೋಟಾ ಸಿಗ್ನೇಚರ್ ಮಾಡಿ ಯಾರಿಗೆ ಜೈಲಿಗೆ ಕಳಿಸಿದ್ರು ಎಂಬುದು ಮಾತನಾಡಿದ್ದೆ. ಆಗ್ಯಾಕೆ ಈ ಬಗ್ಗೆ ಮಾತನಾಡದೇ ಸುಮ್ಮನಾದ್ರು. ಸಾಮಾನ್ಯ ಜನರ ಧ್ವನಿಯಾಗಿ ಈ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಗೆಲ್ಲುವ ವಿಶ್ವಾಸವಿದೆ

ಕಾಂಗ್ರೆಸ್ ಪಕ್ಷದಿಂದ 7 ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಶಿವಮೊಗ್ಗದಿಂದ ಸ್ಪರ್ಧಿಸಲು ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ನಾನು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದೆ. ಒಮ್ಮೆ ಗೀತಾ ಶಿವರಾಜ್ ಕುಮಾರ್ ಕೂಡ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರೆ ಅದರ ಮಾತೇ ಬೇರೆ ಇರೋದು. ಈಗ ಕಾಲ ಚೆನ್ನಾಗಿದೆ. ಹೀಗಾಗಿ, ಗೀತಾ ಶಿವರಾಜ್ ಕುಮಾರ್ ಗೆಲುವಿನ ವಿಶ್ವಾಸವಿದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES