ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವೀಡಿಯೋಗಳ ಪೆನ್ಡ್ರೈವ್ ಪ್ರಕರಣದ ಸ್ಪೋಟಕ ಸುದ್ದಿಯನ್ನು ಪವರ್ ಟಿವಿಯಲ್ಲಿ ಪ್ರಸಾರಮಾಡುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ, ಇಂದು ರಾಜ್ಯಕ್ಕೆ ವಾಪಾಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ಇಂದು ವಿದೇಶದಿಂದ ವಾಪಾಸ್ ಆಗುತ್ತಿರುವ ಹಿನ್ನೆಲೆ ದೇಶದ ಪ್ರಮುಖ ಏರ್ಪೋರ್ಟ್ಗಳಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದ್ದಾರೆ. ಮಂಗಳೂರು, ಕೊಚ್ಚಿ, ಗೋವಾ ಏರ್ಪೋರ್ಟ್ ಸೇರಿದಂತೆ ದೇವನಹಳ್ಳಿ ಏರ್ಪೋರ್ಟ್ನಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ಇದನ್ನೂ ಓದಿ: ಇಡೀ ರಾತ್ರಿ ಆಂತಕದಲ್ಲೇ ಕಾಲ ಕಳೆದ ರೇವಣ್ಣ
ಏರ್ಪೋರ್ಟ್ಗೆ ಆಗಮಿಸುತ್ತಿದ್ದಂತೆ ಪ್ರಜ್ಚಲ್ ರೇವಣ್ಣನನ್ನು SIT ಅಧಿಕಾರಿಗಳು ವಶಕ್ಕೆ ಪಡೆದು ಕರೆತರಲಿದ್ದಾರೆ.
ರೇವಣ್ಣಗೆ ಜೈಲು:
ಪ್ರಜ್ವಲ್ ರೇವಣ್ಣನಿಂದ ಲೈಂಗಿಕ ದೌರ್ಜನ್ಯ ಎದುರಿಸಿರುವ ಸಂತ್ರಸ್ತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ವಿರುದ್ದವೂ ಆರೋಪದ ಮಾಡಿದ್ದರು. ಬಳಿಕ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಬೇಲ್ ಸಿಗದ ಹಿನ್ನೆಲೆ ರೇವಣ್ಣನನ್ನು SIT ಅಧಿಕಾರಿಗಳು ದೇವೇಗೌಡ ಅವರ ನಿವಾಸದಿಂದ ಬಂಧಿಸಿ ಕರೆದೋಯ್ದಿದ್ದಾರೆ.