Monday, May 6, 2024

ಅನಂತಕುಮಾರ್ ಹೆಗಡೆ ಒಬ್ಬ ದೊಡ್ಡ ಹುಚ್ಚ : ಮಧು ಬಂಗಾರಪ್ಪ

ಕಲಬುರಗಿ : ಕಾಂಗ್ರೆಸ್ ಜನರನ್ನು ಹುಚ್ಚು ಮಾಡುತ್ತಿದೆ ಎಂಬ ಸಂಸದ ಅನಂತಕುಮಾರ್ ಹೆಗೆಡೆ ಹೇಳಿಕೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಒಬ್ಬ ದೊಡ್ಡ ಹುಚ್ಚ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಬರುವವರೆಗೂ ಮಲ್ಕೊತ್ತಾನೆ, ಚುನಾವಣೆ ಬಂದ ತಕ್ಷಣ ಎದ್ದು ಬರ್ತಾನೆ. ಈ ಬಾರಿ ಆತನನ್ನ ರಾಜಕೀಯವಾಗಿ ಪರ್ಮನೆಂಟ್ ಮಲಗಿಸುತ್ತೇವೆ. ಏಕವಚನದಲ್ಲಿ ಮಾತನಾಡೋದೆ ಅವರ ಮನೆ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ.

ಮನುಷ್ಯನಿಗೆ ತಲೆ ಎಲ್ಲಿದೆ ಅನ್ನೋದೆ ಗೊತ್ತಿಲ್ಲ

ರಾಜ್ಯದಲ್ಲಿ ಹೆಡ್‌ಲೆಸ್ ಬಿಜೆಪಿಯಿತ್ತು, ಇವಾಗ ಅಶೋಕ್‌ಗೆ ಹೆಡ್ ಮಾಡಿದ್ದಾರೆ. ಆ ಮನುಷ್ಯನಿಗೆ ತಲೆ ಎಲ್ಲಿದೆ ಅನ್ನೋದೆ ಗೊತ್ತಿಲ್ಲ, ಏನೇನೋ ಹೇಳಿಕೆ ಕೊಡ್ತಾರೆ. ಎನ್​ಡಿಆರ್​ಎಫ್ ಪರಿಹಾರಕ್ಕಾಗಿ ಕಾಯಬಾರದು. ಹಾಗಿದ್ರೆ NDRF ತೆಗೆದುಬಿಡೋಕೆ ಹೇಳಿ‌‌. ರಾಜ್ಯದ ಬಡಜನರಿಗೆ ನಮ್ಮ ಉಚಿತ ಗ್ಯಾರಂಟಿ ಅನೂಕುಲ ಆಗಿವೆ ಎಂದು ಹೇಳಿದ್ದಾರೆ.

14 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಈ ಭಾಗದಲ್ಲಿ 14 ಸಾವಿರ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲಾಗಿದೆ. ಕೆಲ ಶಿಕ್ಷಕರ ನೇಮಕಾತಿ ಕೋರ್ಟ್‌ನಲ್ಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 3,900 ಶಿಕ್ಷಕರನ್ನ ನಿಯೋಜಿಸಲಾಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES