Friday, May 10, 2024

ಮಂಡ್ಯದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸಚಿವ ದಿನೇಶ್ ಗುಂಡೂರಾವ್

ಕಲಬುರಗಿ: ಮಂಡ್ಯದಲ್ಲಿ ಕಾಂಗ್ರೆಸ್​ ಗೆಲುವುದು ನಿಶ್ಚಿತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು,ರವೀಂದ್ರ ಯಾರು ಅಂತ ಯಾರಿಗೂ ಗೊತ್ತಿಲ್ಲ ಯಾರೋ ಎಲ್ಲೋ ಕೂತು ಸ್ಟೇಟಮೆಂಟ್ ಕೊಟ್ರೆ ಆಯ್ತಾ ? ಮಂಡ್ಯದಲ್ಲಿ ನಮ್ಮ ಶಾಸಕರು, ಮುಖಂಡರು ಯಾರೂ ಕೂಡ ಈ ರೀತಿ ಮಾತಾಡಿಲ್ಲ ಟಿಕೆಟ್ ಸಿಗದೇ ಇರುವುದರಿಂದ  ರವೀಂದ್ರ ಈ ರೀತಿ ಮಾತಾಡುತ್ತಿರಬಹುದು ಎಂದು ಕಾಂಗ್ರೆಸ್ ನಲ್ಲಿ ದುಡ್ಡು ಕೊಟ್ಟವರಿಗೆ ಟಿಕೆಟ್ ಎನ್ನುವ ರವೀಂದ್ರ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಲೋಕಸಭೆಯಲ್ಲಿ ಕಾಂಗ್ರೆಸ್​ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ: ಸಚಿವ ದಿನೇಶ ಗುಂಡೂರಾವ್

ಮಂಡ್ಯದಲ್ಲಿ ನಮ್ಮ ಎಲ್ಲಾ ಲೀಡರ್ಸ ಒಂದಾಗಿದ್ದಾರೆ ಒಗ್ಗಟ್ಟಾಗಿದ್ದಾರೆ ಬಿಜೆಪಿಯವರು -ಜೆಡಿಎಸ್​ನವರುಯಾರು ನಿಲ್ತಾರೋ ಗೊತ್ತಿಲ್ಲ ಯಾರೇ ನಿಂತರೂ ಮಂಡ್ಯದಲ್ಲಿ ಕಾಂಗ್ರೆಸ್​ ಗೆಲುವುದು ನಿಶ್ಚಿತ ಎಂದು ಟಾಂಗ್​ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES