ಕಲಬುರಗಿ: ನಮ್ಮ ಅತ್ತೆ ಬೇಗ ಸಾಯಿಬೇಕು ಸ್ವಾಮಿ ಎಂದು ಸೊಸೆ ಹರಕೆ ಹೊತ್ತಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಇದೀಗ ವಿಚಿತ್ರ ಹರಕೆಯ ನೋಟು ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡ್ತಿದೆ. 50 ರೂಪಾಯಿ ನೋಟ್ ಮೇಲೆ ನಮ್ಮ ಅತ್ತೆ ಬೇಗ ಸಾಯಿಬೇಕು ಸ್ವಾಮಿ ಎಂದು ಬರೆಯಲಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇಗುಲದ ಹುಂಡಿ ಎಣಿಕೆ ವೇಳೆ ವಿಚಿತ್ರ 50 ರೂ. ನೋಟ್ ಸಿಕ್ಕಿದೆ.
ಇದನ್ನೂ ಓದಿ: ರಾಜ್ಯದ ಶಾಲೆಗಳಲ್ಲಿ ಪಬ್ಲಿಕ್ ಪರೀಕ್ಷೆ ರದ್ದು: ಹೈಕೋರ್ಟ್
ಇತ್ತೀಚಿಗಷ್ಟೇ ಗಾಣಗಾಪುರದ ದತ್ತನ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ನೋಟು ಎಣಿಕೆ ವೇಳೆ 50 ರೂಗಳ ಮುಖಬೆಲೆಯ ನೋಟಿನಲ್ಲಿ ಹರಕೆಹೊತ್ತ ಸೊಸೆಯೊಬ್ಬರು ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ನೀಲಿ ಬಣ್ಣದ ಪೆನ್ ನಲ್ಲಿ ಬರೆಯಲಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ 50 ರೂ ನೋಟು ಭಾರಿ ವೈರಲ್ ಆಗಿದೆ.