ಬೆಂಗಳೂರು ಗ್ರಾಮಾಂತರ: ಸ್ಯಾಂಡಲ್ವುಡ್ ನಟ ವಿನೋದ್ ರಾಜ್ ಅವರು ಇಂದು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ. ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಿಪಡಿಸಿದ್ದಾರೆ.
ನೆಲಮಂಗಲದ ಬಳಿ ಇರೋ ಕರೆಕಲ್ ಕ್ರಾಸ್ ನಿಂದ ಸೋಲದೇವನಹಳ್ಳಿವರೆಗಿನ ರಸ್ತೆಯ ಗುಂಡಿಗಳನ್ನ ತಮ್ಮ ತೋಟದ ಆಳುಗಳ ಸಹಾಯದಿಂದ ನಟ ವಿನೋದ್ ರಾಜ್ ತಾವೇ ಮುಂದೆ ನಿಂತು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಒಬ್ಬ ಮುಸ್ಲಿಂ ಆಗಿದ್ದಿದ್ದರೇ ಸುಮ್ಮನೆ ಬಿಡುತ್ತಿದ್ದರಾ ಮೋದಿ: ಸ್ವರಾ ಭಾಸ್ಕರ್ ಆಕ್ರೋಶ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಇದ್ದ ಕಾಲದಿಂದಲೂ ನಟ ವಿನೋದ್ ರಾಜ್ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಇತ್ತೀಚೆಗೆ ಬರಗಾಲದಿಂದ ಮೇವು ಇಲ್ಲದೆ ತತ್ತರಿಸಿದ್ದ ಕೆಆರ್ ಪೇಟೆ ಜಾನುವಾರುಗಳಿಗೆ ಒಂದು ಟ್ರಕ್ ಒಣ ಹುಲ್ಲನ್ನು ನೀಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ತಾಯಿ ಲೀಲಾವತಿ ನಿಧನದ ಬಳಿಕವೂ ಸಹ ಸಾಮಾಜಿಕ ಕಾರ್ಯಗಳನ್ನ ಮಾಡ್ತಿರೋ ವಿನೋದ್ ರಾಜ್ ಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಆಗ್ತಿದೆ.