Friday, May 10, 2024

ಸೋಲೋದು ಕುಮಾರಸ್ವಾಮಿ ಚಟ ಆಗಿದೆ : ಜಮೀರ್ ಅಹ್ಮದ್

ಬೆಂಗಳೂರು : ಸೋಲೋದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಚಟ ಆಗಿದೆ ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಫಾರೂಖ್ ನಾ ಬಲಿ ಕೊಟ್ಟರು. ಈಗ ಕುಪೇಂದ್ರ ರೆಡ್ಡಿನಾ ಬಲಿ ಕೊಟ್ಟಿದ್ದಾರೆ ಎಂದು ಹೇಳಿದರು.

ಲೋಕಸಭೆಯಲ್ಲಿ ಕಾಂಗ್ರೆಸ್​ ಎಷ್ಟು ಸೀಟು ಗೆಲ್ಲುತ್ತೆ ಎಂಬ ಪ್ರಶ್ನೆಗೆ, ಮೊದಲು ನಾನು 130 ಸೀಟು ಬರುತ್ತೆ ಅಂತ ಹೇಳಿದ್ದೆ. ಆದರೆ, ಯಾರು ನಂಬಿಲ್ಲ. ಆಮೇಲೆ ಏನಾಯ್ತು ನೋಡಿದ್ರಿ. ನಾವು ಲೋಕಸಭೆಯಲ್ಲಿ 20 ರಿಂದ 22 ಸೀಟು ಗೆಲ್ಲುತ್ತೇವೆ. ಅಚ್ಚೇ ದಿನ್ ಅಂತಾರೆ, ಎಲ್ಲಿ ಬಂತು? ಜನ ನಮಗೆ ಅಚ್ಚೇ ದಿನ್ ಬೇಕಿಲ್ಲ, ಹಳೆ ದಿನ ಬೇಕು ಅಂತಿದ್ದಾರೆ ಎಂದು ತಿಳಿಸಿದರು.

ಮುಸ್ಲಿಮರಿಗೆ ಮೂರು ಕ್ಷೇತ್ರ ಕೇಳಿದ್ದೇವೆ

ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್​ನಿಂದ ಎಷ್ಟು ಮಂದಿ ಕಣಕ್ಕಿಳಿಯುತ್ತಾರೆ ಎಂಬ ಪ್ರಶ್ನೆಗೆ, ಮೂರು ಲೋಕಸಭಾ ಕ್ಷೇತ್ರ ಕೇಳಿದ್ದೀನಿ. ಬೆಂಗಳೂರು ಕೇಂದ್ರ, ಹಾವೇರಿ ಹಾಗೂ ಬೀದರ್ ಲೋಕಸಭಾ ಸೇರಿ ಮೂರು ಕ್ಷೇತ್ರ ಕೇಳಿದ್ದೇವೆ. ಹೈಕಮಾಂಡ್ ಯಾವ ಕ್ಷೇತ್ರ ಕೊಡಬೇಕು ಅಂತ ತೀರ್ಮಾನ ಮಾಡುತ್ತೆ ನೋಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

RELATED ARTICLES

Related Articles

TRENDING ARTICLES